Blog

ಆಲೂರು ತಾಲೂಕು ಪತ್ರಕರ್ತರ ಸಂಘ

ಆಲೂರು: ತಾಲ್ಲೂಕು ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆದಿಲ್‌ಪಾಷ ಅವಿರೋಧವಾಗಿ ಆಯ್ಕೆಯಾದರು.

ಆಲೂರುವಿನ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ, ಉಪಾಧ್ಯಕ್ಷರಾಗಿ ಬಿ. ಎನ್. ನವೀನ್‌ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ  ರುದ್ರಕುಮಾರ್, ಕಾರ್ಯದರ್ಶಿಯಾಗಿ ಸತೀಶ್ ಚಿಕ್ಕಕಣಗಾಲು, ಖಜಾಂಚಿಯಾಗಿ ಹೆಚ್. ವಿ. ಚೇತನ್ ಆಯ್ಕೆ ಆದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಬೀರ್ ಅಹಮದ್, ಹೆಚ್. ವೈ. ವಿಶ್ವನಾಥ್, ಎಂ. ಪಿ. ಚಿದಾನಂದ, ಪ್ರದೀಪ, ವೀರಭದ್ರಸ್ವಾಮಿ, ಸಲೀಪಾಷ, ಹೆಚ್. ಡಿ. ಪ್ರದೀಪ್‌ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು, ಚುನಾವಣಾಧಿಕಾರಿಗಳಾದ ಜಿ. ಪ್ರಕಾಶ್ ಮತ್ತು ಚಲಂ ಹಾಡ್ಲಹಳ್ಳಿ ರವರು ಘೋಷಿಸಿದರು.

ಈ ಸಂದರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಪೃಥ್ವಿಜಯರಾಮ್, ಮಾಜಿ ಅಧ್ಯಕ್ಷರಾದ ಎಂ. ಪಿ. ಹರೀಶ್, ಹೆಚ್ ವಿ ರಾಘವೇಂದ್ರ, ನಟರಾಜ್ ನಾಕಲಗೂಡು, ಉಪಸ್ಥಿತರಿದ್ದರು.

ಪತ್ರಕರ್ತರ ನೂತನ ತಂಡಕ್ಕೆ ಮಲ್ನಾಡ್ ಶಾಡೋ ಬಳಗದ ಅಭಿನಂದನೆಗಳು

Related posts

ಬಾಗೆಯಲ್ಲಿ ಸಮಸ್ಯೆ

Bimba Prakashana

ಆಲೂರು ಬಳಿ ರೈಲ್ವೆ ಹಳಿಯಲ್ಲಿ ಮೃತ ವ್ಯಕ್ತಿ ಮೃತ್ಯು

Bimba Prakashana

ಮತದಾರರ ಪಟ್ಟಿಯ ಮ್ಯಾಪಿಂಗ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More