ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷರಾದ ಡಾ॥ಸಾಗರ್ ಜಾನೇಕೆರೆಯವರ ಅಧ್ಯಕ್ಷತೆಯಲ್ಲಿ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿಯವರು ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ಪವನ ಪುತ್ರ ಗ್ರೂಪ್ಸ್ ನ ವಿನಯ್ ದೋಣಿಗಾಲ್ ರವರನ್ನು ಕನ್ನಡ ಭಾವುಟ ನೀಡುವುದರೊಂದಿಗೆ ಆಯ್ಕೆಮಾಡಿ ಸಂಘಟನೆಯ ಜವಾಬ್ದಾರಿ ನೀಡಿದರು.
ಈ ಸಂಧರ್ಭದಲ್ಲಿ ಪವನಪುತ್ರ ಗ್ರೂಪ್ ನ ಅಕ್ಷಯ್ ಜಾನೇಕೆರೆ, ಪವನಪುತ್ರ ಗ್ರೂಪ್ ಯೋಗಿ ಸಂಘಟನೆಗೆ ಸೇರ್ಪಡೆಯಾದರು.
ಯುವ ಘಟಕದ ರಾಜ್ಯಾಧ್ಯಕ್ಷರಾದ ಕೃತಿ ವರ್ಮ ,ಕೌಡಳ್ಳಿ ಘಟಕದ ಅಧ್ಯಕ್ಷರಾದ ಗಿರೀಶ್, ಪದಾಧಿಕಾರಿಗಳಾದ ಕೌಡಳ್ಳಿ ಚಂದ್ರಶೇಖರ್,ದೀಪಕ್, ದಿನೇಶ್ ಪೂಜಾರಿ,ಪರಮೇಶ್,ದಿಲೀಪ್ ಕ್ಯಾಮನಹಳ್ಳಿ ಹಾಗೂ ಇತರರಿದ್ದರು.
ನೂತನ ಯುವಘಟಕದ ಅಧ್ಯಕ್ಷರಿಗೆ ರಾಜ್ಯಾಧ್ಯಕ್ಷರಾದ ಸಾಗರ್ ಜಾನೇಕೆರೆಯವರು ಅಭಿನಂದನೆ ಸಲ್ಲಿಸಿದರು.
