ಆಲೂರು ಮಣಿಪುರ ಬಳಿ ನಡೆದ ಬಸ್ ಬೈಕ್ ಅಪಘಾತದಲ್ಲಿ ಬೈರಾ ಪುರದಲ್ಲಿ ನಿಜಲಿಂಗಪ್ಪ (66ವ) ವರ್ಷ ಮೃತ ಪಟ್ಟ ಘಟನೆ ವರದಿ ಆಗಿದೆ.
ಪತ್ರಕರ್ತರು ಹಾಗೂ ಆಲೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ನವೀನ್ ಬೈರಾ ಪುರರವರ ತಂದೆಯವರು ನವೀನ್ ರವರ ಪುಟ್ಟ ಮಗುವನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಪುಟ್ಟ ಮಗು ಚೇತರಿಸಿಕೊಂಡಿದ್ದು ಆತನಿಗೆ ಚಿಕಿತ್ಸೆ ನಡೆಯುತ್ತಿದೆ.
ನಿಜಲಿಂಗಪ್ಪ ರವರು ತೋಟಕ್ಕೆ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ರಾತ್ರಿ ಹೊತ್ತು ಈ ಘಟನೆ ನಡೆದಿದೆ

