ಆಲೂರು ತಾಲೂಕು ಪಾಳ್ಯ ಪಂಚಾಯತಿ ವ್ಯಾಪ್ತಿಯ ಅರೇ ಹಳ್ಳದಕೊಪ್ಪಲುನಿಂದ ಸಿಂಗೋಡನಹಳ್ಳಿ ಸಂಪರ್ಕಿಸುವ ಕಿರುಸೇತುವೆ ರಾತ್ರಿ ಸುರಿದ ಮಳೆಗೆ ಒಡೆದು ಹೋದ ಘಟನೆ ವರದಿ ಆಗಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಲವಾರು ಕಡೆ ಆತಂಕ ಸೃಷ್ಟಿ ಮಾಡಿದೆ.
ಈ ವಿಚಾರ ತಿಳಿದ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಸ್ಥಳಕ್ಕೆ ಭೇಟಿ ನೀಡಿ ಶೀಘ್ರವಾಗಿ ಕಿರು ಸೇತುವೆಯನ್ನು ದುರಸ್ಥಿ ಪಡಿಸಿಸುವಂತೆ ಅಧಿಕಾರಿಗೆ ಸೂಚನೆ ನೀಡಿದರು.
ಸ್ಥಳಕ್ಕೆ ಜೆಸಿಬಿ ಕರೆಸಿ ಸೇತುವೆ ಅಡ್ಡಲಾಗಿ ಸಿಕ್ಕಿಕೊಂಡಿದ್ದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲಾಯಿತು.










