ರಾಷ್ಟೀಯ ಮಲೆನಾಡು ರಕ್ಷಣಾ ಸೇನೆ ಇದೀಗ ಸಕಲೇಶಪುರದಲ್ಲಿ ಆಂಬುಲೆನ್ ಸೇವೆಯನ್ನು ಪ್ರಾರಂಭಿಸಿದೆ.
ಮಲೆನಾಡ ಸಮಸ್ಯೆ ಪರಿಹಾರಕ್ಕಾಗಿ ಆರಂಭಗೊಂಡ ಈ ಸಂಘಟನೆಯಿಂದ ಈಗಾಗಲೇ ನೂರಾರು ಸಮಸ್ಯೆಗಳನ್ನು ಕಂಡು ಹಿಡಿದು ಹೋರಾಟ ಮೂಲಕ ಆ ಸಮಸ್ಯೆ ಪರಿಹಾರಕ್ಕಾಗಿ ಪ್ರಯತ್ನ ಮಾಡಲಾಗಿತ್ತು.
ಪ್ರತಿ ಒಬ್ಬರ ಜೀವ, ಜೀವನ ಅಮೂಲ್ಯವಾದುದು. ಈ ಅಮೂಲ್ಯವಾದ ಜೀವಕ್ಕೆ ಧಕ್ಕೆ ಆದಾಗ ಅಂತಹಾ ವ್ಯಕ್ತಿಯನ್ನು ತುರ್ತು ಚಿಕಿತ್ಸೆಗೆ ಒಳ ಪಡಿಸ ಬೇಕಾಗುತ್ತದೆ.
ಅನಾರೋಗ್ಯ ಪೀಡಿತ ಅಥವಾ ಅಪಘಾತ ಪೀಡಿತ ವ್ಯಕ್ತಿ ಅಥವಾ ಆತನ ಮನೆಯವರು ಈ ಆಂಬುಲೆನ್ಸ್ ಗೆ ಕರೆ ಮಾಡಿದರೆ ತಕ್ಷಣ ಸ್ಪಂದನೆ ಮಾಡುವ ನಿಟ್ಟಿನಲ್ಲಿ ಮಲೆನಾಡ ರಕ್ಷಣಾ ಸೇನೆ ಈ ಆಂಬುಲೆನ್ಸ್ ಮೂಲಕ ಅವರನ್ನು ತಲುಪುವ ನಿಟ್ಟಿನಲ್ಲಿ ಈ ವ್ಯವಸ್ಥೆ ಕಲ್ಪಿಸಿದೆ…
previous post
next post
