ಮಾತೃ ಸ್ಮರಣೆಯಲ್ಲಿ ಮಹಿಳಾ ಆರೋಗ್ಯ ಕ್ರಾಂತಿ: ‘ರಾಧಮ್ಮ ಜನಸ್ಪಂದನ ಸಂಸ್ಥೆ’ ವತಿಯಿಂದ ಮಹಿಳೆಯರಿಗೆ ಉಚಿತ ಹೆಲ್ತ್ ಕಾರ್ಡ್ ವಿತರಣೆ
ಆಲೂರು: “ಮಹಿಳೆಯರ ಆರೋಗ್ಯವೇ ಕುಟುಂಬದ ಸೌಭಾಗ್ಯ” ಎಂಬ ಧ್ಯೇಯದೊಂದಿಗೆ, ಹೇಮಂತ್ ಕುಮಾರ್ ಅವರು ತಮ್ಮ ತಾಯಿ ರಾಧಮ್ಮ ಅವರ ಸ್ಮರಣಾರ್ಥ ಆಲೂರು ತಾಲೂಕಿನ ರಾಯರಕೊಪ್ಪಲಿನಲ್ಲಿ ಇತ್ತೀಚೆಗೆ ‘ಆರೋಗ್ಯ ರಕ್ಷಾ ಸದಸ್ಯತ್ವ’ ಗುರುತಿನ ಕಾರ್ಡ್ ವಿತರಿಸುವ ಮೂಲಕ ಮಾದರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಲೆನಾಡು ನರ್ಸಿಂಗ್ ಹೋಮ್ನ ಹೆಸರಾಂತ ಸ್ತ್ರೀರೋಗ ತಜ್ಞರಾದ ಡಾ. ಸಾವಿತ್ರಿ, “ಗ್ರಾಮೀಣ ಭಾಗದ ಮಹಿಳೆಯರಲ್ಲಿ ಕ್ಯಾನ್ಸರ್ ಮತ್ತು ಹಾರ್ಮೋನ್ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುತ್ತಿರುವ ‘ರಾಧಮ್ಮ ಜನಸ್ಪಂದನ’ ಸಮಿತಿಯ ಕಾರ್ಯ ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಗಳು ಮಹಿಳೆಯರ ಜೀವ ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ,” ಎಂದು ಅಭಿಯಾನಕ್ಕೆ ತುಂಬು ಹೃದಯದ ಮೆಚ್ಚುಗೆ ವ್ಯಕ್ತಪಡಿಸಿದರು.
ಮಲೆನಾಡು ನರ್ಸಿಂಗ್ ಹೋಮ್ ಸಹಯೋಗದೊಂದಿಗೆ ಈ ಯೋಜನೆ ಜಾರಿಯಾಗುತ್ತಿದ್ದು, ಹೆಲ್ತ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಈ ಕೆಳಗಿನ ಸೌಲಭ್ಯಗಳು ಲಭ್ಯವಿರುತ್ತವೆ:
ಕ್ಯಾನ್ಸರ್ ತಡೆಗಟ್ಟಲು: ಗರ್ಭಕಂಠದ ಕ್ಯಾನ್ಸರ್ ಪತ್ತೆಗೆ ಉಚಿತ ಎಚ್ಪಿವಿ ಡಿಎನ್ಎ (HPV DNA) ಪರೀಕ್ಷೆ ಹಾಗೂ ಸ್ತನ ಕ್ಯಾನ್ಸರ್ ಸ್ಕ್ಯಾನಿಂಗ್.
ರಕ್ತ ಪರೀಕ್ಷೆ: ಹಾರ್ಮೋನ್ ವ್ಯತ್ಯಾಸ ಮತ್ತು ರಕ್ತಹೀನತೆ ಪತ್ತೆಗಾಗಿ ಉಚಿತ ಥೈರಾಯ್ಡ್ ಮತ್ತು ಹಿಮೋಗ್ಲೋಬಿನ್ ಪರೀಕ್ಷೆ.
ರಾಧಮ್ಮ ಜನಸ್ಪಂದನ ಸಂಸ್ಥೆಯ ಸಂಸ್ಥಾಪಕ ಹೇಮಂತ್ ಕುಮಾರ್ ಮಾತನಾಡಿ, “ನನ್ನ ತಾಯಿ ಕಲಿಸಿದ ಸಂಸ್ಕಾರವೇ ಈ ಸೇವೆಗೆ ಮೂಲ ಪ್ರೇರಣೆ. ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಾಂತರ ನನ್ನ ಬೆಳವಣಿಗೆಯಲ್ಲಿ ಶಿಸ್ತು ಮತ್ತು ಪ್ರಾಮಾಣಿಕವಾಗಿ ನನ್ನ ದುಡಿಮೆ ಮುಖಾಂತರವೇ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಗುರಿಯನ್ನು ಹೊಂದಿದ್ದರಿಂದ ಸಾಮಾಜಿಕ ಸೇವೆ ಮಾಡಬೇಕು ಎಂಬ ಸಂಕಲ್ಪವನ್ನು ಈಡೇರಿಸುತ್ತಿದ್ದೇನೆ ಈಗಿನ ಕಾಲದಲ್ಲಿ ಮಹಿಳೆ ಆರೋಗ್ಯವಾಗಿದ್ದರೆ ಇಡೀ ಕುಟುಂಬವೇ ಆರೋಗ್ಯವಾಗಿರುತ್ತದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರು ಈ ಸೌಲಭ್ಯದ ಪ್ರಯೋಜನ ಪಡೆಯಬೇಕು,” ಎಂದು ಕರೆ ನೀಡಿದರು… ಮಹಿಳೆಯರಿಗೆ ಅವಶ್ಯಕತೆ ಬಿದ್ದಲ್ಲಿ ಗರ್ಭಕೋಶದ ಶಸ್ತ್ರ ಚಿಕಿತ್ಸೆಯೂ ಕೂಡ ನಮ್ಮ ರಾಧಮ್ಮ ಜನಸ್ಪಂದನದ ಹೆಲ್ತ್ ಕಾರ್ಡ್ ಮುಖಾಂತರ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಸಿಕೊಡಲಾಗುವುದು… ಕಳೆದ ಒಂದು ವರ್ಷದಿಂದ ತಾಲೂಕಿನ ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳಿಗೆ ಉಚಿತವಾಗಿ ನಮ್ಮ ಸಂಸ್ಥೆಯಿಂದ ಎಚ್ಪಿವಿ ಗರ್ಭಕೋರಲ ಕ್ಯಾನ್ಸರ್ ಲಸಿಕೆಯನ್ನ ಹಾಕಿಸಲಾಗಿದೆ ಈಗ ಕೇಂದ್ರ ಸರ್ಕಾರವೇ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಕಿಸಲು ಅನುಮೋದನೆ ಕೊಟ್ಟಿರುವುದರಿಂದ ನಾನು ಮಾಡುತ್ತಿದ್ದ ಆರೋಗ್ಯ ಸೇವಾ ಚಟುವಟಿಕೆಯನ್ನು ಈ ಹೆಲ್ತ್ ಕಾರ್ಡಿಗೆ ನಮ್ಮ ಸಂಸ್ಥೆಯ ಮುಖಾಂತರ ಹಣವನ್ನು ಖರ್ಚು ಮಾಡುತ್ತಿದ್ದು ನಿಮ್ಮೆಲ್ಲರ ಸೇವೆಗಾಗಿ ಇದನ್ನ ಅರ್ಥಗರ್ಭಿತವಾಗಿ ನಾವು ಸೇವಾ ಮನೋಭಾವದಿಂದ ಒದಗಿಸುತ್ತಿದ್ದೇವೆ..
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣಾ ರಾಜ್ಯ ಸಂಯೋಜಕರಾದ ಜಯರಾಮ ಬೊಳ್ಳಾಜೆ, ಕಾರ್ಯಕ್ರಮ ಉದ್ದೇಶಿಸಿ ಹೇಮಂತ್ ಕುಮಾರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಾಂತರ ಬೆಳೆದಿದ್ದೇನೆ ಎಂಬ ನುಡಿಗಿಂತ ಅವರ ಕಾರ್ಯವನ್ನು ನೋಡಿದರೆ ನಮಗೆ ಅರ್ಥವಾಗುತ್ತದೆ… ಪ್ರತಿಯೊಬ್ಬ ಮಹಿಳೆಯರ ಕೌಟುಂಬಿಕ ಒತ್ತಡದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸುತ್ತ ತಮ್ಮ ಸಾವಿನ ಹಂಚಿಕೆ ತೆಗೆದುಕೊಳ್ಳುವ ಅಪಾಯವನ್ನ ಹೇಮಂತ್ ಕುಮಾರ್ ಅವರು ಹರಿತು ಇಂಥ ಕಾರ್ಯಕ್ರಮದ ಮುಖಾಂತರ ನಿಮ್ಮೆಲ್ಲರ ಜೀವನಕ್ಕೆ ಆರೋಗ್ಯವೇ ನಿಜವಾದ ಆಸ್ತಿ ಎಂದು ಮಾಡುತ್ತಿರುವುದು ಶ್ಲಾಘನೀಯ.. ತಾಯಿಯೇ ದೇವರು ಎಂದು ಭಾವಿಸಿ ತಾಯಿ ಹೆಸರನ್ನು ಮುಖಾಂತರ ಸೇವಾ ಕಾರ್ಯವನ್ನ ತಮ್ಮ ವೈಯಕ್ತಿಕ ದುಡಿಮೆಯಲ್ಲಿ ಕಳೆದ ಆರು ವರ್ಷದಿಂದ ಕಾರ್ಯವನ್ನು ಮಾಡುತ್ತಿರುವುದನ್ನು ನಾವು ಗಮನಿಸುತ್ತಾ ಬಂದಿದ್ದೇವೆ ಇವರ ಕಾರ್ಯಕ್ಕೆ ಜನರ ಸಹಕಾರವು ಕೂಡ ಬಹಳ ಮುಖ್ಯ ಮುಂದಿನ ದಿನಗಳಲ್ಲಿ ಸಂಸ್ಥೆಯು ಇನ್ನು ಹೆಚ್ಚಿನ ಸೇವಾ ಕಾರ್ಯ ಮಾಡಲಿ ಎಂದು ನಾವು ಹಾರೈಸುತ್ತೇವೆ, ಅವರ ತಾಯಿ ಆತ್ಮಕ್ಕೆ ಶಾಂತಿಯನ್ನು ಕೊರುತ್ತವೆ ಎಂದು ನುಡಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಆಶಾ ಕಾರ್ಯಕರ್ತರಿಗೂ ಬಾಗಿನವನ್ನು ಕೊಡಲಾಯಿತು… ಜೊತೆಗೆ ಆಶಾ ಕಾರ್ಯಕರ್ತರಿಗೆ ಕಡುಬಡವರ ಮಹಿಳೆಯರಿಗೆ ಆರೋಗ್ಯ ಸದಸ್ಯತ್ವದ ಬಗ್ಗೆ ಮಾಹಿತಿಯನ್ನು ಕೊಟ್ಟು ಹೆಲ್ತ್ ಕಾರ್ಡ್ ಅವಶ್ಯಕತೆ ಇರುವವರಿಗೆ ರಾಧಮ್ಮ ಜನಸ್ಪಂದನ ಸಂಸ್ಥೆ ಸಂಪರ್ಕಿಸಿ ಎಂದು ಮನವಿ ಮಾಡಿದರು.. ಕಾರ್ಗೋಡು ಗ್ರಾ.ಪಂ. ಪಿಡಿಓ ಸಣ್ಣಪ್ಪ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅನಿಲ್, ಬಿಜೆಪಿ ಮುಖಂಡ ಪೂವಯ್ಯ, ಗ್ರಾ.ಪಂ. ಸದಸ್ಯ ರವಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.


