Blog

ಅಪಘಾತ – ಬೇಲೂರು ಹಾಗೂ ಚಿಕ್ಕಮಗಳೂರುವಿನ ಹಲವರು ಮೃತ್ಯು

ಮಂತ್ರಾಲಯದ ಬಳಿ ಭೀ*ಕರ ರಸ್ತೆ ಅಪಘಾತ: ಎಂಟು ಮಂದಿ ಕನ್ನಡಿಗರ ದುರ್ಮರಣ ( ಮೃ*ರೆಲ್ಲರೂ ಹಾಸನ ಜಿಲ್ಲೆಯ ಬೇಲೂರು ತಾಲೂಕು ಮತ್ತು ಚಿಕ್ಕಮಗಳೂರು ಮೂಲದವರಾಗಿದ್ದಾರೆ)

ಮಂತ್ರಾಲಯ: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಸಮೀಪದ ಚಿಲಕನಡೋಣ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾ*ತದಲ್ಲಿ ಕರ್ನಾಟಕದ ಎಂಟು ಮಂದಿ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃ*ರ ಪೈಕಿ ಐವರು ಮಹಿಳೆಯರು ಹಾಗೂ ಐದು ವರ್ಷದ ಪುಟ್ಟ ಮಗುವೂ ಸೇರಿರುವುದು ದುರಂತದ ತೀವ್ರತೆಯನ್ನು ಹೆಚ್ಚಿಸಿದೆ.
ಘಟನೆಯ ವಿವರ
ಹಾಸನ ಮತ್ತು ಚಿಕ್ಕಮಗಳೂರು ಮೂಲದ ಸುಮಾರು 18 ಜನ ಭಕ್ತರು ವಾಹನದಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕಾಗಿ ತೆರಳುತ್ತಿದ್ದರು. ಇಂದು ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಕನಡೋಣ ಬಳಿ ಇವರ ವಾಹನಕ್ಕೆ ಬೀದರ್‌ನಿಂದ ತುಮಕೂರಿಗೆ ತೆರಳುತ್ತಿದ್ದ ಫ್ಲೈಯಾಶ್ ಟ್ಯಾಂಕರ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಅಪಘಾ*ತದ ಭೀ*ಕರತೆಗೆ ವಾಹನವು ನಜ್ಜುಗುಜ್ಜಾಗಿದ್ದು, ಎಂಟು ಮಂದಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಮೃ*ರ ವಿವರ
ಮೃ*ರೆಲ್ಲರೂ ಹಾಸನ ಜಿಲ್ಲೆಯ ಬೇಲೂರು ತಾಲೂಕು ಮತ್ತು ಚಿಕ್ಕಮಗಳೂರು ಮೂಲದವರಾಗಿದ್ದಾರೆ:
ಕುಮಾರ್ (50): ಕಾನಾಯಕನಹಳ್ಳಿ ಗ್ರಾಮ, ಬೇಲೂರು.
ದೀಪಿಕಾ ವೀಣಾ (42): ಕಾನಾಯಕನಹಳ್ಳಿ ಗ್ರಾಮ, ಬೇಲೂರು.
ಸುನೀಲ್ (40): ಶೆಟ್ಟಿಗೆರೆ ಗ್ರಾಮ, ಬೇಲೂರು.
ಯಶೋದಾ @ ತಾಯಮ್ಮ (60): ಶೆಟ್ಟಿಗೆರೆ ಗ್ರಾಮ, ಬೇಲೂರು.
ಬೆಳ್ಳಿ (5): ದೀಪಿಕಾ ವೀಣಾ ಅವರ ಪುತ್ರಿ, ಕಾನಾಯಕನಹಳ್ಳಿ.
ಲೋಲಾಕ್ಷಿ: ಶೆಟ್ಟಿಗೆರೆ ಗ್ರಾಮ, ಬೇಲೂರು.
ಮೀನಾಕ್ಷಿ: ಉದ್ದೇವು ಗ್ರಾಮ, ಚಿಕ್ಕಮಗಳೂರು.
ಪುಟ್ಟಮ್ಮ (55): ಉದ್ದೇವು ಗ್ರಾಮ, ಚಿಕ್ಕಮಗಳೂರು.
ಗಾಯಾಳುಗಳ ಸ್ಥಿತಿ
ಘಟನೆಯಲ್ಲಿ ಇತರ 9 ಮಂದಿ ತೀವ್ರವಾಗಿ ಗಾ*ಯಗೊಂಡಿದ್ದು, ಅವರನ್ನು ತಕ್ಷಣವೇ ಕರ್ನೂಲು ಮತ್ತು ಎಮ್ಮಿಗನೂರು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿ*ತ್ಸೆ ನೀಡಲಾಗುತ್ತಿದೆ. ಗಾ*ಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಕ್ರಮ
ಸ್ಥಳಕ್ಕೆ ಮಂತ್ರಾಲಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃ*ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಮ್ಮಿಗನೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ಯಾಂಕರ್ ಚಾಲಕನ ನಿರ್ಲಕ್ಷ್ಯವೇ ಅಪಘಾ*ತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ದುಃಖತಪ್ತ ಕುಟುಂಬಗಳು: ರಾಯರ ದರ್ಶನ ಪಡೆದು ಪುನೀತರಾಗಬೇಕೆಂಬ ಹಂಬಲದಿಂದ ತೆರಳಿದ್ದ ಒಂದೇ ಕುಟುಂಬದ ಮತ್ತು ನೆರೆಹೊರೆಯವರ ಸಾ* ಅವರ ಗ್ರಾಮಗಳಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

Related posts

ನಿಜಲಿಂಗಪ್ಪ ಮೃತ್ಯು – ಪತ್ರಕರ್ತರ ಶ್ರದ್ಧಾಂಜಲಿ

Bimba Prakashana

ಆಲೂರುನಲ್ಲಿ ಜನ ಸಂಪರ್ಕ ಸಭೆ

Bimba Prakashana

ಕರವೇಯಿಂದ ಅಹೋ ರಾತ್ರಿ ಹೋರಾಟ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More