ಸಕಲೇಶಪುರ : ಸಮಾಜ ಕಲ್ಯಾಣ ಇಲಾಖೆಯಿಂದ 2026-27 ನೇ ಸಾಲಿಗೆ ನೀಡಲಾಗುವ ರಾಜ್ಯಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಗ್ರಾಮದ, ಹಿರಿಯ ಜನಪರ ಹೋರಾಟಗಾರರಾದ ಹೆಚ್.ಎ.ನ್.ಅಣ್ಣಯ್ಯ ರವರನ್ನು
ಮತ್ತು ನಿವೃತ್ತ ಪಿ ಡಿ ಓ ಕೋಮರಯ್ಯ ರವರನ್ನು
ಮಲೆನಾಡು ಭೀಮ ಧ್ವನಿ ಸಂಘ (ರಿ ) ರವರಿಂದ ಸನ್ಮಾನಿಸಲಾಯಿತು.
ದಿನಾಂಕ 14.04.2026 ರಂದು ವಿಧಾನಸೌಧದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಸರ್ಕಾರದ ವತಿಯಿಂದ *ಮಲೆನಾಡ ಸಿರಿ*, *ದಲಿತ ಕಣ್ಮಣಿ* ಬಿರುದಿನೊಂದಿಗೆ 2026 ನೇ ಸಾಲಿನ ಡಾ|| ಬಿ.ಆರ್ ಅಂಬೇಡ್ಕರ್ ರಾಜ್ಯ ಪ್ರಶಸ್ತಿ ನೀಡಿಪ್ರಶಸ್ತಿ ಪ್ರಧಾನ ಮಾಡಲಾಗಿತ್ತು.
ಹಾಗೂ 2025 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಡಾ||ಬಿ.ಆರ್ ಅಂಬೇಡ್ಕರ್ ರವರ ಪ್ರಶಸ್ತಿಯನ್ನು ನಿವೃತ್ತ ಪಿ.ಡಿ.ಓ ಹಾಗೂ ದಲಿತ ಮುಖಂಡರಾದ ಕೊಮಾರಯ್ಯ ರವರಿಗೆ ನೀಡಲಾಗಿತ್ತು. ಅವರಿಗೂ ಕೂಡ ಸನ್ಮಾನ ಮಾಡುವ ಮೂಲಕ ಗೌರವಪೂರ್ವ ಅಭಿನಂದನೆಗಳನ್ನು ತಿಳಿಸಲಾಯಿತು.
ಮಲೆನಾಡು ಭೀಮಧ್ವನಿ ಸಂಘ (ರಿ) ದಿಂದ ಅಭಿನಂದನಿಸಲಾಯಿತು.
ಈ ಸಂದರ್ಭದಲ್ಲಿ ಸಂಘ ದ ಅಧ್ಯಕ್ಷರಾದ ನಾಗೇಶ್ ಎಂ ಎಚ್ ಮಾಗೇರಿ, ಕಾರ್ಯದರ್ಶಿ ಸುರೇಶ್ ಬಿ ಡಿ, ವಸಂತ ಕುಮಾರ್ ವಿ ಎಂ
ವನಗೂರು ಯೋಗೇಶ್ ಡಿ ಆರ್ ದೊಡ್ಡ ಕಲ್ಲೂರು,ರಾಮಚಂದ್ರ ರಾವ್ ಬ್ಯಾಗಡಹಳ್ಳಿ, ನಾಗೇಶ್ ವಿ ಕೆ ವನಗೂರು, ರವರು ಭಾಗವಹಿಸಿದ್ದರು.
previous post
