ಆಲೂರು : ಸಿಡಿಲು ಬಡಿದು ಎರಡು ಹಸುಗಳನ್ನು ಬಲಿ ಪಡೆದಿರುವ ಘಟನೆ ತಾಲೂಕಿನ ಕುಂದೂರು ಹೋಬಳಿ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ .
ಹೊನ್ನೇನಹಳ್ಳಿ ಗ್ರಾಮದ ನಿವಾಸಿಯಾದ ಕೇಶವ ಬಿನ್ ಚೆನ್ನಯ್ಯನವರಿಗೆ ಸೇರಿದ ಹಸುಗಳು ಈ ದುರ್ಘಟನೆಯಲ್ಲಿ ಸಾವಿಗೀಡಾಗಿವೆ.
ಮನೆಯ ಸಮೀಪದ ಮರದ ಕೆಳಗೆ ಕಟ್ಟಲಾಗಿದ್ದ ಹಸುಗಳ ಮೇಲೆ ಏಕಾಏಕಿ ಸಿಡಿಲು ಬಡಿದ ಪರಿಣಾಮವಾಗಿ, ಎರಡೂ ಹಸುಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ
previous post
