Blog

ಆಲೂರುನಲ್ಲಿ ಸನ್ಮಾನ ಕಾರ್ಯಕ್ರಮ

ಆಲೂರು. ಕಲ್ ವೀರ್ ಅನುದಾನಿತ  ಪ್ರೌಢಶಾಲೆಯಲ್ಲಿ  29 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶಿಕ್ಷಕ ವಾಸುದೇವ ರವರಿಗೆ ಸನ್ಮಾನ ಹಾಗೂ ಬಿಳ್ಕೊಡುಗೆ ಸಮಾರಂಭ  ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಶಾಸಕ  ಸಿಮೆಂಟ್ ಮಂಜು ಮಾತನಾಡಿ ಶಾಲೆಯ ಶಿಕ್ಷಕರ ಶ್ರಮ ಹಾಗೂ ವಿದ್ಯಾರ್ಥಿಗಳ ಪ್ರಯತ್ನದಿಂದ ಈ ಶಾಲೆಗೆ ಶೇ. 100 ಫಲಿತಾಂಶ ದೊರಕಿದ್ದು ಮುಂದೆಯೂ ಸಹ ಇದೇ ರೀತಿ ಫಲಿತಾಂಶಗಳು ದೊರಕಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನೃತ್ಯ ಮಾಡಿದ ಪಾಠವನ್ನು ಅಂದೇ ಓದಿ ಮನನ ಜೀವನದಲ್ಲಿ ಈಗಲೇ ಚಿಂತನೆ ಮಾಡಿ ಚನ್ನಾಗಿ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಮುಂದೆ ಏನಾಗಬೇಕು ಎಂಬುದನ್ನು

ಅಭ್ಯಾಸ ಮಾಡಿ ಆ ಗುರಿಯನ್ನು ಮುಟ್ಟಿ ಸಮಾಜಕ್ಕೆ, ಕುಟುಂಬಕ್ಕೆ ಒಳ್ಳೆಯ ಹೆಸರನ್ನು ತನ್ನಿ ಹಾಗೂ . ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ಕಟ್ಟಿಕೊಳ್ಳುವುದು ಶಿಕ್ಷಣದಿಂದ ಮಾತ್ರ ಸಾಧ್ಯ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿ ಇಷ್ಟ ಹಾಗೂ ಕಷ್ಟ ಪಟ್ಟು ಅಭ್ಯಾಸ ಮಾಡುವ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಳ್ಳಿ ಎಂದು ತಿಳಿಸುತ್ತಾ, ಈ ಶಾಲೆಯ ಉತ್ತಮ ಶಿಕ್ಷಕರಾದ ವಾಸುದೇವರು  ರವರು ನಿವೃತ್ತಿ ಹೊಂದುತ್ತಿರುವುದು ನಮ್ಮ ಆಡಳಿತ ಮಂಡಳಿಗೆ ನೋವಿದೆ. ಇವರ ನಿವೃತ್ತಿ ಜೀವನ ಸುಖಕರವಾಗಿರಲಿ
ಎಂದು ಆಶಿಸುತ್ತೇನೆ ಎಂದು ಮಾತನಾಡಿದಲ್ಲದೆ
29 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶಿಕ್ಷಕ ವಾಸುದೇವ ರವರನ್ನು ಶಾಸಕ ಸಿಮೆಂಟ್ ಮಂಜು ಹಾಗೂ ಶಾಲಾ ಆಡಳಿತ ಮಂಡಳಿಯ ವರು ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಮುಖ್ಯ ಶಿಕ್ಷಕರು ಶಿಕ್ಷಕರು. ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಳೆ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಇದ್ದರು.

Related posts

ಹಿಂದೂ ಹಿತ ರಕ್ಷಣಾ ವೇದಿಕೆಯಿಂದ ಯೋಧರಿಗೆ ನಮನ

Bimba Prakashana

ಹೆನ್ನಲಿ ಗ್ರಾಮದ ಯುವಕ ನಾಪತ್ತೆ – ಮಾಹಿತಿ ನೀಡಿ

Bimba Prakashana

ಬೇಲೂರುನಲ್ಲಿ ರೌಡಿ ಶೀಟರ್ ಅನುಮಾನಸ್ಪದ ಸಾವು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More