Blog

ಹೆತ್ತೂರು ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ದಾಸ್ತಾನು ತೂಕದಲ್ಲಿ ಲೋಪ

***
ನಾಗೇಶ್ ಎಂ ಎಚ್ ಮಾಗೇರಿ.



*ಹೆತ್ತೂರು ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ದಾಸ್ತಾನು ತೂಕದಲ್ಲಿ ಲೋಪ – ಗ್ರಾಹಕರಿಂದ ಆಕ್ರೋಶ*


ಸಕಲೇಶಪುರ ತಾಲ್ಲೂಕು ವ್ಯಾಪ್ತಿಯ‌ ಹೆತ್ತೂರು ಗ್ರಾಮದ ಹೆತ್ತೂರಿನ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಅಂತ್ಯೋದಯ ಕಾರ್ಡ್ ಹೊಂದಿರುವ ಬಡಕುಟುಂಬಕ್ಕೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸರಿಯಾದ ಪ್ರಮಾಣದಲ್ಲಿ ಅಕ್ಕಿ ಮತ್ತು ರಾಗಿಯನ್ನು ಪೂರೈಸುತ್ತಿಲ್ಲ,ಸರ್ಕಾರದಿಂದ ಸಿಗುವ ಅಕ್ಕಿ,ರಾಗಿಯನ್ನೇ ಅವಲಂಬಿಸಿರುವ ಹಲವಾರು ಅಂತ್ಯೋದಯ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆಯೆಂದು ಹೆತ್ತೂರು ಗ್ರಾಮದ ಗ್ರಾಹಕರೊಬ್ಬರು ಆಹಾರ ಇಲಾಖೆ ಮತ್ತು ತಾಲ್ಲೂಕು ತಹಸೀಲ್ದಾರ್ ರವರಿಗೆ ದೂರು ನೀಡಿದರು.

ಹಾಗೆಯೇ ತಾಲ್ಲೂಕಿನಾದ್ಯಂತವಿರುವ ಕೆಲವು ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ಅಕ್ಕಿ ಪಡೆಯಲು ನ್ಯಾಯಬೆಲೆ ಅಂಗಡಿಗಳಲ್ಲಿ 10-20-30ರೂ.ಗಳಂತೆ ಹಣ ಪಡೆಯುತ್ತಿದ್ದಾರೆ ಹಾಗೂ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಇಂದಿಗೂ ಕೂಡ ಡಿಜಿಟಲ್ ಅಳತೆ ಮಾಪನ ಬಳಸದೆ ತೂಕದ ಬಟ್ಟುಗಳನ್ನು ಇಟ್ಟು ಅಳತೆ ಮಾಡುತ್ತಿದ್ದಾರೆ. ಗ್ರಾಹಕರಿಗೆ ಇದರಿಂದ ಗೊಂದಲಗಳುಂಟಾಗುತ್ತಿದೆ. ತಾವುಗಳು ಪ್ರತಿ ನ್ಯಾಯಬೆಲೆ ಅಂಗಡಿಗಳಿಗೆ ಡಿಜಿಟಲ್ ಅಳತೆಮಾಪನದ ಮೂಲಕ ಸರಿಯಾದ ಪ್ರಮಾಣದಲ್ಲಿ ಅಕ್ಕಿ, ರಾಗಿ ಮತ್ತು ಇತರೆ ಸಾಮಾಗ್ರಿಗಳನ್ನು ವಿತರಿಸಬೇಕೆಂದು ಮತ್ತು ಪ್ರತಿ ನ್ಯಾಯಬೆಲೆ ಅಂಗಡಿಗಳ ಸೂಚನಾ ಫಲಕ ದಲ್ಲಿ ಪ್ರತಿ ತಿಂಗಳು ಅಂತ್ಯೋದಯ ಕುಟುಂಬಗಳು,ಬಿ.ಪಿ.ಎಲ್ ಕುಟುಂಬಗಳು ಮತ್ತು ಎ.ಪಿ‌.ಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಆಯಾ ತಿಂಗಳು ನೀಡಬೇಕಾದ ದಾಸ್ತಾನು ವಿವರಗಳನ್ನು ಸೂಚಿಸುವಂತೆ ಹಾಗೂ ದಾಸ್ತಾನು ನೀಡಲು ಪಡೆದುಕೊಳ್ಳಲು ಯಾವುದೇ ಹಣವನ್ನು ನೀಡಬಾರದೆಂಬ ಸೂಚನ ಫಲಕವನ್ನು ಕಡ್ಡಾಯವಾಗಿ ಹಾಕಬೇಕೆಂದು ಆಗ್ರಹಿಸಲಾಯಿತು..

****🌹🌹🌹

ಈ ರೀತಿಯ ತಪ್ಪುಗಳು ಆಗದೆ ಇರುವ ಹಾಗೆ ಕ್ರಮ ವಹಿಸುತ್ತೇವೆ.   ಗ್ರಾಹಕರಿಗೆ ಆಗಿರುವ ನಷ್ಟವನ್ನು ಕೂಡಲೇ ತುಂಬಿಸುವಂತೆ ಸಂಬಂಧ ಪಟ್ಟವರಿಗೆ ತಿಳಿಸುತ್ತೇವೆ.

– ಅಕಿಲೇಶ್ – ಕಾರ್ಯದರ್ಶಿ ( ನ್ಯಾಯಬೆಲೆ ವರ್ತಕರ ಸಂಘ-ಸಕಲೇಶಪುರ )

***🌹🌹🌹🌹
ಹಲವಾರು ಅಂತ್ಯೋದಯ ಕಾರ್ಡ್ ಹೊಂದಿರುವ ನನ್ನಂತ ಅವಿದ್ಯಾವಂತರಿಗೆ ಸರಿಯಾದ ಮಾಹಿತಿ ನೀಡದೆ ಹೀಗೆ ತೂಕದಲ್ಲಿ   ಮೋಸ ಮಾಡುತ್ತಿರುವುದರಿಂದ ಇದನ್ನೆ ಅವಲಂಬಿಸಿರುವ ನನ್ನಂತವರಿಗೆ ಬಹಳ ಅನ್ಯಾಯವಾಗುತ್ತಿದೆ.

ಸುಬ್ಬಯ್ಯ- ಹೆತ್ತೂರು – ಗ್ರಾಹಕರು

****🌹🌹🌹🌹
ನಾನು ಕಳೆದ ಒಂದು ತಿಂಗಳ ಹಿಂದೆ ಇಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ನಮ್ಮ ವ್ಯಾಪ್ತಿಯಲ್ಲಿ ಇರುವ ಅಂತ್ಯೋದಯ ಕಾರ್ಡ್ ಗಳ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸಿ ಅವರ ಕಾರ್ಡ್ ಗಳ ಮೇಲೆ ಬರೆದು ಕಳಿಸಿದ್ದೇನೆ. ಆಗಿರುವ ಲೋಪವನ್ನು ಸರಿ ಮಾಡಿ, ಇಂತಹ ಪ್ರಕರಣಗಳು ಮರುಕಳಿಸದಂತೆ ಇನ್ನಷ್ಟು ಕ್ರಮ ತೆಗೆದುಕೊಳ್ಳುತ್ತೇನೆ.

* ನಾಗರಾಜು – ಮುಖ್ಯ ಕಾರ್ಯನಿರ್ವಹಣಾಧಿಕಾರಿ,ಹೆತ್ತೂರು ನ್ಯಾಯಬೆಲೆ ಅಂಗಡಿ

Related posts

ರಸ್ತೆ ಗುಂಡಿ ಮುಚ್ಚಿದ ಸ್ಥಳೀಯ ಗ್ರಾಮಸ್ಥರು

Bimba Prakashana

ಬಕ್ರೀದ್ ಕುರ್ಬಾನಿಗೆ ಕೂಡಿಟ್ಟಿದ್ದ ನಂದಿ – ರಕ್ಷಣೆ ಕಾರ್ಯಾಚರಣೆ ಮಾಡುವಾಗ ಮೃತ್ಯು

Bimba Prakashana

ಶಾಸಕರ ಮೇಲೆ ದಬ್ಬಾಳಿಕೆ ನಿಲ್ಲಿಸದಿದ್ದರೆ ಹೋರಾಟ – ಎಸ್ ಸಿ ಮೋರ್ಚಾ ಎಚ್ಚರಿಕೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More