***
ನಾಗೇಶ್ ಎಂ ಎಚ್ ಮಾಗೇರಿ
ಗ್ರಾಮ ಅಧ್ಯಕ್ಷರಾದ ಹೇಮಂತ್ ಕುಮಾರ್ ಮತ್ತು ಗ್ರಾಮಸ್ಥರಿಂದ
ರಸ್ತೆಯ ಗುಂಡಿ ಮುಚ್ಚುವ ಕಾರ್ಯ.
*ಕಣ್ಮುಚ್ಚಿ ಕುಳಿತ*
*ಇಂಜಿನಿಯರ್ ಮತ್ತು ಕಂಟ್ರಾಕ್ಟರ್*.
ಸಕಲೇಶಪುರ ಮಾಗೇರಿ ಸೋಮವಾರಪೇಟೆ ಮಾರ್ಗದ ಎಸ್ ಎಚ್ 8 ರಸ್ತೆಯಲ್ಲಿ ಹಿಜ್ಜಿನಹಳ್ಳಿ ಯ ಹತ್ತಿರ ತಡೆಗೋಡೆ ಕಾಮಗಾರಿಯನ್ನು ಮಾಡುತ್ತಿದ್ದ ಸಂದರ್ಭದಲ್ಲಿ ರಸ್ತೆಯನ್ನು ಕತ್ತರಿಸಿ
ಕಾಮಗಾರಿ ಮಾಡಿದ್ದರು
ಕಾಮಗಾರಿ ಮುಗಿಸಿ ಹೋಗುವ
ಸಂದರ್ಭದಲ್ಲಿ ರಸ್ತೆಯನ್ನೂ ಸರಿಯಾಗಿ ಮುಚ್ಚದೆ ಮಳೆ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಮಾಡದೆ ರಸ್ತೆ ಗುಂಡಿ ಬಿದ್ದು ವಾಹನಗಳು ಮತ್ತು ಬೈಕ್ ಚಾಲಕರು ಅಪಾಯದ ಅಂಚಿನಲ್ಲಿ ಹೋಗುತ್ತಿದ್ದರು.
ಇಂಜಿನಿಯರ್ ಮತ್ತು ಕಂಟ್ರಾಕ್ಟರ್ ಗೆ ಮಾಹಿತಿ ತಿಳಿಸಿದ್ದರು ಸಹಾ ಇದನ್ನು ಸರಿಪಡಿಸುವ ಗೋಜಿಗೆ ಹೋಗಿರಲಿಲ್ಲ.
ಆದ್ದರಿಂದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹೇಮತ್ ಕುಮಾರ್ ಮತ್ತು ಗ್ರಾಮಸ್ಥರು ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದಾರೆ.


