Blog

ಎತ್ತಿನ ಹೊಳೆ ಕಾರ್ಯಕ್ರಮಕ್ಕೆ ತಲುಪಲು ಮಾರ್ಗ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ  ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯನ್ನು ಲೋಕಾರ್ಪಣೆ ಮಾಡಲು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀ   ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರು ಹಾಗೂ ಸಚಿವರುಗಳು   ಸಕಲೇಶಪುರಕ್ಕೆ  ಆಗಮಿಸಲಿದ್ದು , ಇದರ ಸಂಬಂಧ ಸಕಲೇಶಪುರ ತಾಲೂಕಿನ ಕೆಲವು ಕಡೆ ರಸ್ತೆ ಮಾರ್ಗಗಳನ್ನು ಸಾರ್ವಜನಿಕ ಸಂಚಾರಕ್ಕೆ ನಿಷೇಧಿಸಲಾಗಿದೆ ಹಾಗೂ ಬದಲಿ ಮಾರ್ಗಗಳನ್ನು ಕಲ್ಪಿಸಲಾಗಿರುತ್ತದೆ , ಸಾರ್ವಜನಿಕರು ಈ ಕೆಳಗಿನ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗಿ ಸೂಚಿಸಲಾಗಿದೆ.


1. ಹಾಸನ ಮತ್ತು ಸಕಲೇಶಪುರ ಮಾರ್ಗವಾಗಿ ಬರುವ ಸಾರ್ವಜನಿಕರು ಈಶ್ವರಹಳ್ಳಿ ಕೂಡುಗೆಯಿಂದ ಬೆಳಗೋಡು ರಸ್ತೆ ಮುಖಾಂತರ ಹೆಬ್ಬನಹಳ್ಳಿಯ ಸಮಾರಂಭ ಸ್ಥಳಕ್ಕೆ ತೆರಳುವುದು.
2. ಹಾಸನ ಮತ್ತು ಸಕಲೇಶಪುರ ಮಾರ್ಗವಾಗಿ ಬರುವ ಸಾರ್ವಜನಿಕರು ಬಾಗೆ- ಬೆಳಗೋಡು ರಸ್ತೆ ಮುಖಾಂತರ ಹೆಬ್ಬನಹಳ್ಳಿಯ ಸಮಾರಂಭ ಸ್ಥಳಕ್ಕೆ ತೆರಳುವುದು.
3. ಬೇಲೂರು ಅರೇಹಳ್ಳಿ ಮಾರ್ಗವಾಗಿ ಬರುವ ಸಾರ್ವಜನಿಕರು ಸುಂಡೇಕೆರೆ ಸರ್ಕಲ್ ಮೂಲಕ ಹೆಬ್ಬೆನಹಳ್ಳಿಯ ಸಮಾರಂಭ ಸ್ಥಳಕ್ಕೆ ತೆರಳುವುದು.
4. ಗುಲಗಳಲೆ ಚಿಕ್ಕಿ ಫ್ಯಾಕ್ಟರಿ ಮುಖಾಂತರ ಹೆಬ್ಬನಹಳ್ಳಿ ಸಮಾರಂಭ ಸ್ಥಳಕ್ಕೆ ತೆರಳುವ ರಸ್ತೆಯಲ್ಲಿ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ.

Related posts

ಪೊಲೀಸ್ ಠಾಣೆ ಸ್ವಚ್ಛತೆ ಮಾಡುವಂತೆ ಆದೇಶ ನೀಡಿದ ನ್ಯಾಯಾಲಯ

Bimba Prakashana

ಕಾಫಿ ಆಚರಣೆಗೆ ಈ ಒಂದು ದಿನ

Bimba Prakashana

ರಾಧಮ್ಮ ಜನ ಸ್ಪಂದನದಿಂದ ವಿದ್ಯಾರ್ಥಿನಿಯರಿಗೆ ಆರೋಗ್ಯ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More