ವರದಿ ರಾಣಿ ಪ್ರಸನ್ನ
ಸಕಲೇಶಪುರದ ಶ್ರೀ ಹಾಡ್ಯ ಸುಬ್ಬೆ ಗೌಡರ ಪುರಭವನ, ಇವರ ವತಿಯಿಂದ ಶ್ರೀ ಗಣಪತಿ ಸೇವಾ ಸಮಿತಿಯ 63ನೇ ವರ್ಷದ ಶ್ರೀ ಗಣಪತಿ ಪ್ರತಿಷ್ಠಾಪನಾ ಮತ್ತು ವಿಸರ್ಜನಾ ಮಹೋತ್ಸವ ನಡೆಯಿತು
ದಿನಾಂಕ 7/9/24ರಂದು ಪ್ರತಿಷ್ಠಾಪಿಸಿ ದಿನಾಂಕ 12/9/2024ರಂದು ವಿಸರ್ಜನಾ ಕಾರ್ಯಕ್ರಮ ಮಾಡಲಾಯಿತು . ಬೆಳಗ್ಗೆ 8.30ಕೆ ಶ್ರೀ ಮಹೇಶ್ ಭಟ್ ಮತ್ತು ಸಹಾಯಕ ಅರ್ಚಕರಿಂದ ಚತುರ್ಧ್ರವ್ಯ ಮಹಾಗಣಪತಿ ಹೋಮ , 12.30ಕ್ಕೆ ಮಹಾಪೂಜೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಿ ಮದ್ಯಾಹ್ನ 3.00ಘಂಟೆಗೆ ವಿಸರ್ಜನೆಗೆ ಸಜ್ಜಾದ ಗಣಪ. ಪುಷ್ಪಾಲಾಂಕೃತ ರಥದಲ್ಲಿ ಮಂಡಿಸಿದ ಗಣಪತಿ ಉತ್ಸವವು ವಿವಿಧ ಕಲಾ ತಂಡದೊಂದಿಗೆ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿದ ನಂತರ ಪವಿತ್ರ ಹೇಮಾವತಿ ನದಿಯಲ್ಲಿ ವಿಸರ್ಜಿಸಲಾಯಿತು.
previous post
next post
