Blog

ಬಿಜೆಪಿಯಲ್ಲಿ ಬಾಗೆ ಗೋಪಿನಾಥ್ ಗೆ ಸ್ಥಾನ

ವರದಿ ರಾಣಿ ಪ್ರಸನ್ನ

ಭಾರತೀಯ ಜನತಾ ಪಾರ್ಟಿ  ಇದರ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಬಾಗೆ ಗೋಪಿನಾಥ್ (ಹಳೆಬಾಗೆ )ರನ್ನು ಆಯ್ಕೆ ಮಾಡಲಾಗಿದೆ.

ಬಾಗೆ ಹಾಗೂ ಸಕಲೇಶಪುರದಲ್ಲಿ ಬಹಳಷ್ಟು ಚಿರಪರಿಚಿತರಾಗಿರುವ ಅವರು ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡುವ ಮೂಲಕ ಜನಾನುರಾಗಿಯಾಗಿದ್ದಾರೆ.

ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ  ನೇಮಕ ಮಾಡಿದ ಭಾರತೀಯ ಜನತಾ ಪಾರ್ಟಿಗೆ ಅವರು ಅನಂತ  ಧನ್ಯವಾದಗಳನ್ನು ಹೇಳಿದ್ದಾರೆ . ನನ್ನ ನೇಮಕಕ್ಕೆ ಸಹಕರಿಸಿದ ಜನಪ್ರಿಯ ಶಾಸಕರಾದ ಸಿಮೆಂಟ್ ಮಂಜಣ್ಣ , ಬಿಜೆಪಿ ಜಿಲ್ಲಾಧ್ಯಕ್ಷರಾದ ಸಿದ್ದೇಶ್ ನಾಗೇಂದ್ರ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷರಾದ ವಳಲಹಳ್ಳಿ ಅಶ್ವಥ್ ಅಣ್ಣ ನವರಿಗೆ ನಾನು ಅಭಾರಿಯಾಗಿದ್ದೇನೆ. ನನಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಸಮರ್ಥವಾಗಿ ನಿರ್ವಹಿಸಲು ಎಲ್ಲರ ಸಹಕಾರ, ಮಾರ್ಗದರ್ಶನ ಬಹು ಮುಖ್ಯ ಈ ನಿಟ್ಟಿನಲ್ಲಿ ಎಲ್ಲರ ಆಶೀರ್ವಾದ ಬೇಡುತ್ತ ಅಭಿನಂದಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ

Related posts

ಕರಾಟೆ ಚಾಂಪಿಯನ್ ಶಿಪ್

Bimba Prakashana

ಬಸ್ ಸೌಲಭ್ಯ ಕಲ್ಪಿಸಿ

Bimba Prakashana

ಹಾನು ಬಾಳು ಬಳಿ ಅಕ್ರಮ ಮರ ವಶಕ್ಕೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More