ಹಾಸನ ಜಿಲ್ಲೆಯಲ್ಲಿನ ಈ ಕೆಳಕಂಡ ಗ್ರಾಮಗಳಲ್ಲಿ ಕಾಡಾನೆಗಳು ಕಂಡುಬಂದಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕಾಗಿ ವಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಸಕಲೇಶಪುರ ತಾಲ್ಲೂಕಿನ ಸುಳ್ಳಕ್ಕಿ ಮೇಘಲಕೆರೆ ಗ್ರಾಮದ ವಿಜಿಶೆಟ್ಟಿ ಅವರ ತೋಟದ ಪಕ್ಕದ ಕಾಡು, ಸುತ್ತಮುತ್ತ ಕಾಡಾನೆಗಳು ಕಂಡು ಬಂದಿರುತ್ತವೆ
ಹೆತ್ತೂರು ಯಸಳೂರು ಹೋಬಳಿಯ
ಮರ್ಜನಹಳ್ಳಿ ಗ್ರಾಮದ ಹಂಜಲ್ ಗದ್ದೆ, ಹಳ್ಳಿಬೈಲು ಗ್ರಾಮದ ಕಾರೆ ಕುರಾವ್, ಮೆಕ್ಕಿರಮನೆ ಗ್ರಾಮದ ಹೆಗ್ಗೋಡ್ಲು, ಹೊಸಳ್ಳಿ ಗ್ರಾಮದ ಹಟ್ಟಮನ್ ಹಡ್ಲು, ತಂಬಲಗೇರಿ ಗ್ರಾಮದ ಬೆಟ್ಟ, ಬಾಚಿಹಳ್ಳಿ ಗ್ರಾಮದ ಬೀರಲು ದಿಣ್ಣೆ, ಹಳ್ಳಿಬೈಲು ಏಕ ರೆಸಾರ್ಟ್ ಹಿಂಭಾಗದ ಅಕೇಶಿಯಾ ಪ್ಲಾಂಟೇಷನ್, ಹೊಂಗಡಹಳ್ಳ ಗ್ರಾಮದ ಕಾಡುತೋಟ ಕೆರೆ ತಪ್ಪಲು, ಜೇಡಿಗದ್ದೆ, ಸುತ್ತಮುತ್ತ ಕಾಡಾನೆಗಳು ಕಂಡುಬಂದಿರುತ್ತವೆ
ಬೇಲೂರು ತಾಲ್ಲೂಕಿನ
ಬಾಳಗುಲಿ ಗ್ರಾಮದ ಭೈರದೇವರ ಗುಡ್ಡ ಹಾಗೂ ಬಿ ಆರ್ ಲಕ್ಷ್ಮಣ್ ಅವರ ತೋಟ, ಜಗಬೋರನಹಳ್ಳಿ ಗ್ರಾಮದ ಜಗಬೋರನಹಳ್ಳಿ ಫಾರೆಸ್ಟ್, ಕಾನಹಳ್ಳಿ ಗ್ರಾಮದ ಕಾನಹಳ್ಳಿ ಫಾರೆಸ್ಟ್, ಶಿರಾಗುರ ಗ್ರಾಮದ ಮಲ್ಲೇಶ್ವರ ಎಸ್ಟೇಟ್ 8 ಎಕರೆ ಪಟ್ಟೆ ಹಾಗೂ ವೈ ಡಿ ನಂಜೇಗೌಡ್ರು ತೋಟ, ಬಾಳಗುಲಿ (ಕಲ್ಗoಡಿ) ಗ್ರಾಮದ ವಿಜಯ ಎಸ್ಟೇಟ್ ಹಾಗೂ ಬಿ ಆರ್ ಲಕ್ಷ್ಮಣ್ ಎಸ್ಟೇಟ್, ಗುಮ್ಮನಹಳ್ಳಿ ಗ್ರಾಮದ , ಸುತ್ತಮುತ್ತ ಕಾಡಾನೆಗಳು ಕಂಡುಬಂದಿರುವೆ.
ಆಲೂರು ತಾಲ್ಲೂಕಿನ
ದೊಡ್ಡಬೆಟ್ಟ ಮೀಸಲು ಅರಣ್ಯ, ಹಾಚ ಗೋಡನಹಳ್ಳಿ ಗ್ರಾಮದ ಅಕೇಶಿಯ ನಡುತೋಪು ಸುತ್ತಮುತ್ತ ಕಾಡಾನೆಗಳು ಕಂಡುಬಂದಿರುತ್ತವೆ.
ಸಾರ್ವಜನಿಕರು ಕಾಡಾನೆಗಳಿಂದ ಎಚ್ಚರಿಕೆಯಿಂದ ಇರಬೇಕಾಗಿ ಅರಣ್ಯ ಇಲಾಖೆ ತಿಳಿಸಿದೆ
previous post
