Blog

ಆಲೂರುನಲ್ಲಿ ಸಂತಾಪ ಕಾರ್ಯಕ್ರಮ

*ನಾಡಿನ ಹಿರಿಯ ಸಾಹಿತಿ ಪದ್ಮಭೂಷಣ ಎಸ್.ಎಲ್.ಬೈರಪ್ಪ ರವರು ನಿಧನಕ್ಕೆ ಸಂತಾಪ

        ಆಲೂರು*ಸೆ-25ನಾಡಿನ ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ ರವರ ನಿಧನಕ್ಕೆ ಆಲೂರಿ ನಲ್ಲಿ ಸಂತಾಪ ಸೂಚನೆ ಮಾಡಲಾಯಿತು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ 26-07-1934 ರಲ್ಲಿ  ಇವರು ಜನಿಸಿದರು. ಆನೇಕ ಪ್ರಶಸ್ತಿಗಳಾದ ಸರಸ್ವತಿ ಸನ್ಮಾನ್ ಪ್ರಶಸ್ತಿ,ನಾಡೋಜ ಪ್ರಶಸ್ತಿ,ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಆನೇಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಲೇಖಕರಾಗಿ,ವಿಮರ್ಶಕರಾಗಿ,ಅಧ್ಯಾಪಕರಾಗಿ, ಕಥೆ,ಕಾಂದಬರಿ ಮತ್ತು ಇತಿಹಾಸ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.1999 ರಲ್ಲಿ ಕನಕಪುರದಲ್ಲಿ ನೆಡೆದ 67 ಅಖಿಲ ಭಾರತ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು ನೂರಾರು ಕಾದಂಬರಿ ರಚಿಸಿದ್ದಾರೆ. ಇವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸ್ಮರಿಸಿದರು. ಈ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಆಲೂರು ಮತ್ತು ಧರ್ಮಸ್ಥಳ ಸಂಘದ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಜರುಗಿತು ಧರ್ಮಸ್ಥಳ ಸಂಘದ ಯೋಜನಾಧಿಕಾರಿಗಳಂತಹ ಶ್ರೀಯುತ ರತ್ನಾಕರ್ ಅವರು ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕರಾದಂತಹ ಶ್ರೀ ಸುರೇಶ್ ರವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಂತಹ ಶ್ರೀಯುತ ಗೋಪಾಲಕೃಷ್ಣರವರು ಹಾಗೂ ಕಸಬಾ ಹೋಬಳಿ ಅಧ್ಯಕ್ಷರಾದ ಶ್ರೀಯುತ ಮಲ್ಲಿಕಾರ್ಜುನ್ ರವರು ಮತ್ತು ಆಲೂರು ತಾಲೂಕು ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಕಾರ್ಯದರ್ಶಿಯಾದಂತಹ ಶ್ರೀ ಪವನ್ ಆಲೂರು ಸಾಹಿತಿಗಳು ಇನ್ನೂ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.

Related posts

ಗೌರಿ ಗಣೇಶ ಹಬ್ಬದ ಶುಭಾಶಯಗಳು

Bimba Prakashana

ಬೆಳಗೋಡು ಬಳಿ ಹುಲ್ಲಿನ ಲಾರಿಗೆ ಬೆಂಕಿ

Bimba Prakashana

ಶ್ರೀಮತಿ ಪುಷ್ಪಾವತಿ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More