Blog

ಸಕಲೇಶಪುರ ಬಾಗೆ ಬಳಿ ಕೆರೆಯ ಜಾಗ ಒತ್ತುವರಿ – ಕಂದಾಯ ಇಲಾಖೆಯ ಗಮನಕ್ಕೆ ಬಂದಿಲ್ಲವೇ?

ಸಕಲೇಶಪುರ ಬಾಗೆ ಬಳಿ ಸರಕಾರಿ ಕೆರೆಯ ಜಾಗಕ್ಕೆ ಬೇಲಿ ಹಾಕಿ ಒತ್ತುವರಿ ಮಾಡಿರುವ ಘಟನೆ ವರದಿ ಆಗಿದೆ.

ಈ ಘಟನೆ ಕಳೆದ ಒಂದು ತಿಂಗಳಿಂದ ನಡೆಯುತ್ತಿದೆ. ನೀರು ತುಂಬಿ ಜನರಿಗೆ ಆಸರೆ ಆಗಬೇಕಾದ ಈ ಕೆರೆಯನ್ನು ಯಾತಕ್ಕಾಗಿ ಒತ್ತುವರಿ ಮಾಡಲಾಗಿದೆ. ಸರಕಾರಿ ಜಾಗ ಒತ್ತುವರಿ ಮಾಡಲು ಅವಕಾಶ ಕೊಟ್ಟವರು ಯಾರು ಎಂಬ ಪ್ರಶ್ನೆಗಳೆಲ್ಲ ಸ್ಥಳೀಯರಲ್ಲಿ ಎದ್ದಿದೆ.

ಕಂದಾಯ ಅಧಿಕಾರಿಗಳ ಗಮನಕ್ಕೆ ಬಂದಿಲ್ವ?

ಬಾಗೆಯಲ್ಲಿ ಸರಕಾರಿ ಜಾಗ ಒತ್ತುವರಿ ಆಗುತ್ತಿದ್ದರು ಕೂಡಾ ಕಂದಾಯ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲವೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಏಳ ತೊಡಗಿದೆ.

ಅರಣ್ಯ ಇಲಾಖೆಯ ಜಾಗದಲ್ಲಿ ಸಣ್ಣ ಮನೆ ಕಟ್ಟಿದರೂ ಅಪರಾಧ ಎಂದು ಬಿಂಬಿಸುವ ಮಟ್ಟದಲ್ಲಿದ್ದರೆ, ಕಂದಾಯ ಇಲಾಖೆಯಲ್ಲಿ ಮಾತ್ರ ಯಾತಕ್ಕೆ ಹೀಗೆ ಎಂದು ಆಲೋಚನೆ ಮಾಡುವಂತೆ ಆಗಿದೆ.

Related posts

ಸಕಲೇಶಪುರ ಹೊಸ ಬಸ್ ನಿಲ್ದಾಣ ಬಳಿ ಪೊಲೀಸ್ ವ್ಯವಸ್ಥೆ

Bimba Prakashana

ಪತ್ರಕರ್ತರಿಗೆ ಬಸ್ ಪಾಸ್ – ಉದಯ ಹೆಚ್ ಹೆಚ್ ಸಂತಸ

Bimba Prakashana

ರಾಯರ ಕೊಪ್ಪಲು ನಲ್ಲಿ ರಕ್ತ ದಾನ ಶಿಬಿರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More