ಸಕಲೇಶಪುರ ಬಾಗೆ ಬಳಿ ಸರಕಾರಿ ಕೆರೆಯ ಜಾಗಕ್ಕೆ ಬೇಲಿ ಹಾಕಿ ಒತ್ತುವರಿ ಮಾಡಿರುವ ಘಟನೆ ವರದಿ ಆಗಿದೆ.
ಈ ಘಟನೆ ಕಳೆದ ಒಂದು ತಿಂಗಳಿಂದ ನಡೆಯುತ್ತಿದೆ. ನೀರು ತುಂಬಿ ಜನರಿಗೆ ಆಸರೆ ಆಗಬೇಕಾದ ಈ ಕೆರೆಯನ್ನು ಯಾತಕ್ಕಾಗಿ ಒತ್ತುವರಿ ಮಾಡಲಾಗಿದೆ. ಸರಕಾರಿ ಜಾಗ ಒತ್ತುವರಿ ಮಾಡಲು ಅವಕಾಶ ಕೊಟ್ಟವರು ಯಾರು ಎಂಬ ಪ್ರಶ್ನೆಗಳೆಲ್ಲ ಸ್ಥಳೀಯರಲ್ಲಿ ಎದ್ದಿದೆ.
ಕಂದಾಯ ಅಧಿಕಾರಿಗಳ ಗಮನಕ್ಕೆ ಬಂದಿಲ್ವ?
ಬಾಗೆಯಲ್ಲಿ ಸರಕಾರಿ ಜಾಗ ಒತ್ತುವರಿ ಆಗುತ್ತಿದ್ದರು ಕೂಡಾ ಕಂದಾಯ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲವೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಏಳ ತೊಡಗಿದೆ.
ಅರಣ್ಯ ಇಲಾಖೆಯ ಜಾಗದಲ್ಲಿ ಸಣ್ಣ ಮನೆ ಕಟ್ಟಿದರೂ ಅಪರಾಧ ಎಂದು ಬಿಂಬಿಸುವ ಮಟ್ಟದಲ್ಲಿದ್ದರೆ, ಕಂದಾಯ ಇಲಾಖೆಯಲ್ಲಿ ಮಾತ್ರ ಯಾತಕ್ಕೆ ಹೀಗೆ ಎಂದು ಆಲೋಚನೆ ಮಾಡುವಂತೆ ಆಗಿದೆ.
previous post
next post
