ದಿನಾಂಕ 24/10/2025 ರಂದು ಸಕಲೇಶಪುರದ ಕುಶಾಲನಗರ ಬಡಾವಣೆಯ ನಿಂಗರಾಜು ಬಿನ್ ಲಕ್ಷ್ಮೇಗೌಡ ಎಂಬುವನು ಸಕಲೇಶಪುರ ಪುರಸಭೆಯ ಕಛೇರಿಗೆ ನುಗ್ಗಿ ಅಲ್ಲಿನ ದಾಖಲಾತಿಗಳಿಗೆ ಬೆಂಕಿ ಹಚ್ಚಿದಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಈ ಬಗ್ಗೆ ಇದಕ್ಕೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣದ ಆರೋಪಿ ನಿಂಗ@ನಿಂಗರಾಜು ನನ್ನು ಸಕಲೇಶಪುರ ನಗರ ಪೊಲೀಸ್ ಇನ್ಸ್ ಪೆಕ್ಟರ್ ವಿ.ಸಿ.ವನರಾಜು ನೇತೃತ್ವದ ತಂಡ ಬಂಧಿಸಿದೆ.
