ವರದಿ.
ನಾಗೇಶ್ ಎಂ ಎಚ್ ಮಾಗೇರಿ
ಒಂದು ವಾರದಿಂದ ಕತ್ತಲೆ ಜೀವನ
ಕಳೆಯುತ್ತಿರುವ ಕಲ್ಲಹಳ್ಳಿ ಗ್ರಾಮದ ಕುಟುಂಬಗಳು.
ಜನರಿಗೆ ಸರಿಯಾಗಿ ಸ್ಪಂದಿಸದ
ಎ ಇ ಇ ಮತ್ತು ಸಹೋದ್ಯೋಗಿಗಳು.
ಒಬ್ಬರು ಬಿಲ್ ಕಟ್ಟದಿದ್ದಕ್ಕೆ
ಟ್ರಾನ್ಸ್ಫರ್ ಅಳವಡಿಸಲು ಅಧಿಕಾರಿಗಳು ಮೀನಮೇಷ
ಬಡ ಕುಟುಂಬಗಳಿಗೆ ಕತ್ತಲೆಯ ಬದುಕು
ಹಾಸನ ಜಿಲ್ಲೆಯ
ಸಕಲೇಶಪುರ ತಾಲೂಕು ಯಶಳೂರು ಹೋಬಳಿಯ ಮಾಗೇರಿ ಆಂಚೆ
ಹಾಸನ ಜಿಲ್ಲೆಯ ಗಡಿ ಗ್ರಾಮದ
ಕಲ್ಲಹಳ್ಳಿ ಗ್ರಾಮದಲ್ಲಿ ಸುಮಾರು
ಕುಟುಂಬಗಳಿಗೆ ವಿದ್ಯುತ್ ಇಲ್ಲದೆ
ಪರದಾಡುವ ಪರಿಸ್ಥಿತಿ ಎದುರಾಗಿದೆ.
ಈ ಭಾಗದಲ್ಲಿ ಕಾಡಾನೆ ಮತ್ತು ಕಾಡುಕೋಣ ಇತರೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚು ಇರುವುದರಿಂದ ಈ ಭಾಗದಲ್ಲಿ ತುಂಬಾ ಅನಾಹುತಗಳು ಹೆಚ್ಚಾಗುವ ಸಾಧ್ಯತೆ ತುಂಬಾ ಇದೆ .
ಗ್ರಾಮದ ಹಲವರು ಮನೆಗಳಿಗೆ ಸರಬರಾಜು ಆಗುವ ಟ್ರಾನ್ಸಫಾರಂ ಹಾಳಾಗಿರುವುದರಿಂದ ಹಲವಾರು ಕುಟುಂಬಗಳಿಗೆ ಕತ್ತಲೆಯಿಂದ ಜೀವನ ಮಾಡುವ ಪರಿಸ್ಥಿತಿ ಎದುರಾಗಿದೆ.
ಇದರ ಬಗ್ಗೆ ಸಾರ್ವಜನಿಕರು ಇಲಾಖೆಯ ಅಧಿಕಾರಿಗಳಿಗೆ ಕಾಲ್ ಮಾಡಿದರೆ ಉಡಪೆ ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಜೊತೆಗೆ ಮನೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗಿದೆ.
ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ.
ಸಾರ್ವಜನಿಕರು ಮತ್ತೆ ಕಾಲ್ ಮಾಡಿದರೆ ಅಧಿಕಾರಿಗಳು ಫೋನ್ ಸ್ವಿಚ್ ಆಫ್.
ಕೊಡಲೇ ಇದಕ್ಕೆ ಸಂಬಂಧ ಪಟ್ಟ ಸ್ಪಂದಿಸಬೇಕಾಗಿ ಮನವಿ ಮಾಡುತ್ತೇನೆ.
ಬಾಬು. ಕೆ. ಎ.
ಮಾಜಿ ಗ್ರಾಮ ಪಂಚಾಯತಿ ಸದಸ್ಯರು.
previous post
next post
