ಸಕಲೇಶಪುರ : ಮಳೆಗಾಲದಲ್ಲಿ ಹಾಗೂ ಇತರ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಬಂದಾಗ ಲೈನ್ ಮೆನ್ ಗಳು ವಿದ್ಯುತ್ ಸಮಸ್ಯೆ ಪರಿಹಾರ ಮಾಡಲು ಬಹಳಷ್ಟು ಪ್ರಯತ್ನ ಪಡುತ್ತಾರೆ. ಈ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. ಆದರೆ ಕೆಲವೇ ಕೆಲವು ಮಂದಿ ಲೈನ್ ಮೆನ್ ಗಳು ಜನರೊಂದಿಗೆ ಕೆಟ್ಟ ವರ್ತನೆ ಮಾಡುವ ಬಗ್ಗೆ ಹಲವಾರು ಮಂದಿ ಆಕ್ಷೇಪ ಎತ್ತಿದ್ದಾರೆ.
ಸಕಲೇಶಪುರದ ಕುಶಾಲನಗರ ಬಡಾವಣೆಯಲ್ಲಿ ಇಂತಹದೊಂದು ಘಟನೆ ನಡೆದಿದೆ.
ಈ ಘಟನೆಯಲ್ಲಿ ಲೈನ್ ಮ್ಯಾನ್ ದುರ್ವರ್ತನೆ ಮಾಡಿದ್ದು ಅಲ್ಪ ಪ್ರಮಾಣದ ಮೊತ್ತಕ್ಕೆ.ಏಕಾಏಕಿ ಕರೆಂಟ್ ಕಟ್ ಮಾಡಲು ಬಂದ ಲೈನ್ ಮ್ಯಾನ್ ಮನೆಯವರು ಕೇಳಲು ಹೋದರೆ ಉಡಾಫೆ ಉತ್ತರಗಳನ್ನು ನೀಡಿ ದಬ್ಬಾಳಿಕೆಗೆ ಮುಂದಾದರು.
ಕರೆಂಟ್ ಕಟ್ ಮಾಡುವುದಕ್ಕೂ ಮುನ್ನವೇ ಮಾಲೀಕರಿಗೆ ಮಾಹಿತಿ ನೀಡಬೇಕು ಸ್ವಲ್ಪ ಕಾಲಾವಕಾಶ ಕಲ್ಪಿಸಿ ಕೊಡಬೇಕಾಗಿರುವುದು ಆದೇಶವಾಗಿರುತ್ತದೆ.
ಆದರೆ ಸಕಲೇಶಪುರದ ಕೆಲ ಲೈನ್ ಮ್ಯಾನ್ ಗಳ ಕತೆ ಹೇಳೋಕೆ ಸಾಕಾಗಲ್ಲ. ಮನೆ ಮಾಲೀಕರ ಜೊತೆ ದಬ್ಬಾಳಿಕೆ ನಡೆಸಿ ಏಕಾಏಕಿ ಡಿಸ್ಕನೆಕ್ಟ್ ಮಾಡಿ ಗೂಂಡಾಗಿರಿ ಮೆರೆಯುತ್ತಿದ್ದಾರೆ.
ಕೇಳಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಸ್ವಲ್ಪ ಹೊತ್ತು ಕಾಲಾವಕಾಶ ಕೊಡಿ ಎಂದು ಕೇಳಿದರು ಪುಡಿ ರೌಡಿಗಳಂತೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಮತ್ತು ಮನೆಯ ಮಾಲೀಕರಾದ ವೃದ್ಧಿಯ ಜೊತೆ ಅಸಭ್ಯವಾಗಿ ವರ್ತಿಸಿರುವುದು ಸಾರ್ವಜನಿಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
