ಸಕಲೇಶಪುರ ಐದನೇ ವಾರ್ಡ್ ಬ್ರಾಹ್ಮಣರ ಬೀದಿಯಲ್ಲಿ ಇತ್ತೀಚೆಗೆ ಕಾಂಕ್ರೀಟ್ ಚರಂಡಿ ಕಾಮಗಾರಿ ನಿರ್ವಹಿಸಿರುತ್ತಾರೆ.
ಈ ಕಾಮಗಾರಿ ಮುಗಿದಿದೆ. ಆದರೆ ಚರಂಡಿಯಲ್ಲಿ ಹರಿದು ಬರುವ ನೀರು ಮುಂದೆ ಹೋಗುವ ಸ್ಥಳದಲ್ಲಿ ಅಂಡರ್ ಗ್ರೌಂಡ್ ಕಾಲುವೆಯಲ್ಲಿ ತ್ಯಾಜ್ಯ ಬ್ಲಾಕ್ ಆಗಿದ್ದು ಈಗ ಸುಮಾರು ಹತ್ತು ದಿನಗಳಿಂದ ನೀರು ಮುಂದಕ್ಕೆ ಹರಿದು ಹೋಗದೆ ಚರಂಡಿಯಲ್ಲಿ ತುಂಬಿಕೊಂಡಿರುತ್ತದೆ.
ಇದರಿಂದ ದಿನೇ ದಿನೇ ಸೊಳ್ಳೆಗಳ ಸಂತತಿ ಹೆಚ್ಚಾಗಿದ್ದು, ರೋಗರುಜಿನ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ಪುರಸಭಾ ಮುಖ್ಯಾಧಿಕಾರಿಗಳು, ಪುರಸಭಾ ಆಡಳಿತ ಅಧಿಕಾರಿಗಳು ಹಾಗೂ ಸಂಬಂಧಿಸಿದ ಆರೋಗ್ಯ ನಿರೀಕ್ಷಕರುಗಳು ಇತ್ತ ಗಮನ ಹರಿಸಿ ಕೂಡಲೇ ತುರ್ತು ಕ್ರಮ ವಹಿಸಲು ಈ ಪ್ರದೇಶದ ನಿವಾಸಿಗಳು ಕೋರಿರುತ್ತಾರೆ.
