ಸಕಲೇಶಪುರದ ಯಸಳೂರುವಿನ ಮತ್ತೂರು ಬಳಿ ಇ ಟಿ ಎಫ್ ಸಿಬ್ಬಂದಿಗಳ ಮೇಲೆ ಆನೆ ದಾಳಿ ಮಾಡಿದೆ.
ಇ ಟಿ ಎಫ್ ಸಿಬ್ಬಂದಿಗಳು ಇಂದು ಬೆಳಿಗ್ಗೆ ಆನೆಗಳ ಚಲನವಲನ ನೋಡಲು ಬಂದಾಗ ಏಕಾ ಏಕಿ ದಾಳಿ ಮಾಡಿದೆ.
ಪ್ರಸನ್ನ ಹಾಗೂ ಯುವರಾಜ್ ಎಂಬ ಸಿಬ್ಬಂದಿಗಳ ಮೇಲೆನೆ ಇ ಆನೆ ದಾಳಿ ಮಾಡಿದೆ
ಇ ಘಟನೆ ನಡೆದು ಸುಮಾರು 2 ಘಂಟೆ ಕಳೆದರೂ ಸಹಾಯಕ್ಕೆ(6.40 ಕ್ಕೆ ನಡೆದ ಘಟನೆ )ಯಾವ ಸಿಬ್ಬಂದಿಗಳು ಬಂದಿಲ್ಲ.
ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಈ ಗತಿಯಾದರೆ ಸಾರ್ವಜನಿಕರ ಗತಿಯೇನು.
ಇದು ಈ ಒಂದು ದಿನದ ಸಮಸ್ಯೆ ಅಲ್ಲ. ಪ್ರತಿದಿನ ವ್ಯವಸಾಯಕ್ಕೆ ಶಾಲೆಗೆ ಗದ್ದೆ ತೋಟಕ್ಕೆ ಹೋಗಿ ಬರುವ ಶಾಲಾಮಕ್ಕಳು ಗೋಳು ಏನು.
ದಯವಿಟ್ಟು ಇದಕ್ಕೆ ಒಂದು ಶಾಸ್ವತ ಪರಿಹಾರ ಯಾವಾಗ ಅರಣ್ಯ ಮಂತ್ರಿಗಳೆ ಇನ್ನೂ ಏನಾಗಬೇಕು ಏತಕ್ಕಾಗಿ ಈ ವಿಳಂಬ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ







