ಹಾನುಬಾಳು ಹೋಬಳಿ ಘಟಕಕ್ಕೆ ನೂತನ ಪದಾಧಿಕಾರಿಗಳು . .
ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವ ಕರವೇ ( ಪ್ರವೀಣ್ ಶೆಟ್ಟಿ ಬಣ)
ಕರವೇ ವತಿಯಿಂದ ಆಗುತ್ತಿರುವ ಹಲವು ಜನಪರ ಕಾಳಜಿಯ ಸಮಾಜ ಸೇವೆಯ ಚಟುವಟಿಕೆಗಳನ್ನು ಮೆಚ್ಚಿ ದಿನೇ ದಿನೇ ವೇದಿಕೆಯ ವ್ಯಾಪ್ತಿ ವಿಸ್ತರಿಸುತ್ತಾ ಬಂದಿದೆ.
ಈಗ ಹಾನುಬಾಳು ಹೋಬಳಿ ಕರವೇ ( ಪ್ರವೀಣ್ ಶೆಟ್ಟಿ ಬಣ)
ಘಟಕ ಸ್ಥಾಪನೆಗೊಂಡಿದ್ದು ಬಹು ಸಂಖ್ಯೆಯಲ್ಲಿ ಕಾರ್ಯಕರ್ತರು ಸ್ವಯ೦ಪ್ರೇರಿತರಾಗಿ ವೇದಿಕೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಮುಂದೆ ಬಂದಿರುತ್ತಾರೆ.
ಹಾನುಬಾಳು ಹೋಬಳಿ ಕರವೇ ಅಧ್ಯಕ್ಷರಾಗಿ ಶ್ರೀ ಸೈನಾರ್ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಭಾಸ್ಕರ್ ಅವರನ್ನು ತಾಲೂಕು ಕರವೇ ಅಧ್ಯಕ್ಷರಾದ ರಮೇಶ್ ಪೂಜಾರಿ ನೇಮಕ ಮಾಡಿರುತ್ತಾರೆ.
ಈ ಸುಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಪುರುಶೋತ್ತಮ್ ಸತೀಶ್ ಅಬ್ಬಾಸ್ ಲಕ್ಷ್ಮಣ್ ಹಾಗೂ ಶರಣ್ ಉಪಸ್ಥಿತರಿದ್ದರು.
