ಸಿಡಿಲು ಬಡಿದು ವೃದ್ದೆ ಸಾವು. : ಮರದಡಿ ನಿಂತಿದ್ದಾಗ ಬಂದೆರಗಿದ ಸಿಡಿಲು
ಆಲೂರು : ತಾಲ್ಲೂಕಿನ ಮಾದಿಹಳ್ಳಿ ಗ್ರಾಮದ ನೀಲಮ್ಮ(70) ವರ್ಷ ಸಿಡಿಲಿಗೆ ಬಲಿಯಾದ ದಾರುಣ ಘಟನೆ ನಡೆದಿದೆ ನೀಲಮ್ಮ ಮೃತ ದುರ್ದೈವಿಯಾಗಿದ್ದು ಇಂದು ಮದ್ಯಾಹ್ನ ಧನ ಕರುಗಳನ್ನು ಹೊಲದಲ್ಲಿ ಮೇಯಿಸುತ್ತಿದ್ದಾಗ ಸಂಜೆ ಸುಮಾರು 5 ಗಂಟೆ ಸಮಯದಲ್ಲಿ ಗುಡುಗು ಸಹಿತ ಮಳೆ ಬಂದಿದ್ದರಿಂದ ಜಮೀನಿನಲ್ಲಿದ್ದ ಮರದ ಕೆಳಗೆ ನಿಂತುಕೊಂಡಿದ್ದಾಗ ಸಿಡಿಲು ಬಡಿದ ತಕ್ಷಣ ಅಕ್ಕ ಪಕ್ಕದಲ್ಲಿದ್ದವರು ಮತ್ತು ಗ್ರಾಮದವರು ಆಕೆಯನ್ನು ಆಲೂರು ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕೆತ್ಸೆಗೆ ಕರೆತರುವಾಗ ಸ್ಥಳದಲ್ಲೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ
ಸಿಡಿಲಿನ ಅಬ್ಬರ ಎಸ್ಟಿತೆಂದರೆ ವೃದ್ದೆ ಅಶ್ರಯ ಪಡೆಯಲು ನಿಂತಿದ್ದ ಬೃಹತ್ ಮರವೇ ಸೀಳಿ ಎರಡು ಭಾಗವಾಗಿದೆ ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
previous post
next post
