ದಿನಾಂಕ 21.04.2026ನೇ ಮಂಗಳವಾರದಂದು ಜೈ ಭೀಮ್ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷರಾದ ಜಗದೀಶ್ ಹಾಸನ ಜಿಲ್ಲೆಗೆ ಆಗಮಿಸಿದ್ದರು.
ಈ ಪೂರ್ವಭಾವಿ ಸಭೆಯನ್ನು ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಜೈ ಭೀಮ್ ಕ್ರಾಂತಿ ಸೇನೆಯ ಜಿಲ್ಲಾಧ್ಯಕ್ಷರಾದ ಬೆಳಗೋಡು ಬಸವರಾಜ್ ಹಾಗೂ ಹಾಸನ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಶಾನು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಜೋಡಿ ಕೃಷ್ಣಾಪುರ ನಾಗರಾಜ್ ಹಾಸನ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಜಾನ್ ಹೆನ್ರಿ ಜಿಲ್ಲಾ ಸದಸ್ಯರಾದ ಹಾಲು ಲೋಕೇಶ್ ಮತ್ತು ಬಾಚಿಹಳ್ಳಿ ಚಂದ್ರು, ನಿಂಗರಾಜ್ ಗೆಕರವಳ್ಳಿ ಭಾಗವಹಿಸಿ ಇವರ ಸಮ್ಮುಖದಲ್ಲಿ ಜೈ ಭೀಮ್ ಕ್ರಾಂತಿ ಸೇನೆಯ ಪದಾಧಿಕಾರಿಗಳ ಆಯ್ಕೆ ವಿಚಾರವಾಗಿ ಚರ್ಚಿಸಲಾಗಯಿತು.
ಮುಂದಿನ ದಿನದಲ್ಲಿ ಹಾಸನ ಜಿಲ್ಲೆಯ 8 ತಾಲೂಕಿನ ಪದಾಧಿಕಾರಿಗಳನ್ನು ಕರೆದು ಸಭೆ ಕರೆಯಲು ಸರ್ವಾನುಮತದಿಂದ ಒಪ್ಪಿಗೆ ಪಡೆದು ಜೈ ಭೀಮ್ ಕ್ರಾಂತಿ ಸೇನೇಯ ರಾಜ್ಯಾಧ್ಯಕ್ಷರಿಗೆ ಸನ್ಮಾನಿಸಿ ಸಭೆಯನ್ನು ಮುಕ್ತಾಯ ಮಾಡಲಾಯಿತು
