Blog

ಕ್ಷೇತ್ರ ಶಿಕ್ಷಣ ಅಧಿಕಾರಿ ಪುಷ್ಪರಿಗೆ ಸನ್ಮಾನ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಾಲಾ ಶಿಕ್ಷಣ ಇಲಾಖೆ ಸಕಲೇಶಪುರ, ಇಲ್ಲಿನ ಡಾ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ,  ಸಕಲೇಶಪುರ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿ ಪುಷ್ಪರನ್ನು ಅಭಿನಂದಿಸಲಾಯಿತು.

2025 -26 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ -1 ರಲ್ಲಿ  ಸಕಲೇಶಪುರವು 99.25% ಫಲಿತಾಂಶ ಪಡೆಯುವುದರೊಂದಿಗೆ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮತ್ತು ತಾಲೂಕಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಕಾರಣೀಕರ್ತರಾದ ಶ್ರೀಮತಿ ಪುಷ್ಪ ಎಸ್,ಇವರ ಸಾಧನೆ ಮಹತ್ತರ.

ಇವರನ್ನು ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಮತ್ತು ಮುಖ್ಯ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು..
ಇವರು ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಆಡಳಿತ ಮಂಡಳಿ, ಏಕರೂಪವಾದ ಮತ್ತು ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಅನುಷ್ಠಾನ ಮಾಡಲು ಕ್ರಮ ವಹಿಸಿರುತ್ತಾರೆ .

ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ಇವರು ಶ್ರಮವಹಿಸಿರುತ್ತಾರೆ. ಕಳೆದ ಸಾಲಿನಲ್ಲಿ ಸಕಲೇಶಪುರ ತಾಲೂಕು ರಾಜ್ಯಕ್ಕೆ 3ನೇ ಸ್ಥಾನ ಪಡೆದು ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಪಡೆಯಲು ಕಾರಣಿಕರ್ತಗಿರುತ್ತಾರೆ.. ಈ ವರ್ಷವೂ ಸಹ ರಾಜ್ಯಮಟ್ಟದ ಶ್ರೇಯಾಂಕದಲ್ಲಿ ತಾಲೂಕು ಉತ್ತಮ ಸ್ಥಾನ ಪಡೆಯುವ ನಿರೀಕ್ಷೆ ಇದೆ..

Related posts

ಯುದ್ಧ ಪೀಡಿತ ದೇಶದಲ್ಲಿರುವ ಹಾಸನದವರ ಮಾಹಿತಿಗಾಗಿ ಸೂಚನೆ

Bimba Prakashana

ದಿಶಾ ಹೆಚ್ ರೈ ಗೆ ಎಂ ಎಸ್ ಸಿ ಗಣಿತದಲ್ಲಿ ಚಿನ್ನದ ಪದಕ

Bimba Prakashana

ವೈಚಾರಿಕ ಪತ್ರಿಕೆಯಿಂದ ಪ್ರತಿಭೆ ಪುರಸ್ಕಾರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More