ಸಕಲೇಶಪುರದ ಕೆ. ಎಸ್. ಆರ್. ಟಿ. ಸಿಯಲ್ಲಿ ಉದ್ಯೋಗ ಮಾಡುತ್ತಿದ್ದ ಕೇಶವಮೂರ್ತಿ ಹೃದಯಘಾತದಿಂದ ನಿಧನರಾಗಿದ್ದಾರೆ.
ನಿಧನ ಕಾಲಕ್ಕೆ ಅವರಿಗೆ 45 ವರ್ಷ ವಯಸ್ಸು ಆಗಿತ್ತು.
ಸಕಲೇಶಪುರ ಶಾಸಕರಾದ ಸಿಮೆಂಟ್ ಮಂಜುರವರ ಶಾಲಾ ದಿನಗಳ ಸಹಪಾಠಿಯಾಗಿದ್ದ ಇವರು ವಿವಿಧ ಆಟಗಳಲ್ಲಿ ಕ್ರೀಡಾಪಟುವಾಗಿ ಹೆಸರು ಪಡೆದಿದ್ದರು.ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಸಕಲೇಶಪುರ ಹಿಂದೂ ರುದ್ರ ಭೂಮಿಯಲ್ಲಿ ಇಂದು ಮಧ್ಯಾಹ್ನ ನಡೆಯಲಿದೆ.
