ಹಾಸನ ಜಿಲ್ಲೆ ಆಲೂರುನಲ್ಲಿ ಸಾಮಾಜಿಕ,ರಾಜಕೀಯ,ರೈತಪರ,ಶೋಷಿತರ,
ದಮನಿತರ,ನೊಂದವರ ಪರವಾಗಿ ಜಾತ್ಯಾತೀತ,ಪಕ್ಷಾತೀತವಾಗಿ,ಸಾರ್ವಜನಿಕ ಸೇವೆಗಾಗಿ ಪ್ರತ್ಯೇಕ ಪತ್ರಿಕಾ ಗೋಷ್ಠಿಯನ್ನು ರಚಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(ನೋಂ)ಅಧ್ಯಕ್ಷರಾದ ಧರಣೇಂದ್ರ ಹೆಚ್.ಎಂ ತಿಳಿಸಿದ್ದಾರೆ.
ಬ್ಲಾಕ್ ಮೇಲ್ ಪತ್ರಿಕೋದ್ಯಮಕ್ಕೆ ಸಡ್ಡು ಹೊಡೆದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಗ್ರಾಮೀಣ ಜನರ ಧ್ವನಿಯಾಗಿ ಈ ಸಂಘ ಬೆನ್ನಲುಬಾಗಿದೆ.
ಈಗಾಗಲೇ ಆಲೂರಿನ ನಗರದಲ್ಲಿ ಪತ್ರಿಕಾ ಗೋಷ್ಠಿಗಾಗಿ ಕಚೇರಿಯನ್ನು ನಿರ್ಮಿಸಲಾಗಿದ್ದು ಪತ್ರಿಕಾ ಗೋಷ್ಠಿಗಳಿದ್ದರೆ ಮೊಬೈಲ್ ಸಂಖ್ಯೆ 9448741484/9743174825/6366664749 ಸಂಪರ್ಕ ಮಾಡುವಂತೆ ಪತ್ರಕರ್ತರ ಸಂಘ ತಿಳಿಸಿದೆ.
ಈಗಾಗಲೇ ಈ ಸಂಘದಲ್ಲಿ ಹಲವಾರು ಪತ್ರಿಕಾ ಗೋಷ್ಠಿ ಮಾಡಲಾಗಿದ್ದು, ಇನ್ನಷ್ಟು ಸಹಕಾರ ಬೇಕಾದವರು ಸಂಪರ್ಕ ಮಾಡುವಂತೆ ತಿಳಿಸಿದ್ದಾರೆ
