🔴ಕರ್ನಾಟಕ ಬಂದ್ ಗೆ ಕ ರ ವೇ ಪ್ರವೀಣ್ ಶೆಟ್ಟಿ ಬೇಲೂರು ಘಟಕದಿಂದ ವಿರೋದ.ವಿ.ಎಸ್ ಬೋಜೆಗೌಡ ಸ್ಪಷ್ಟನೆ*
.
ಬೇಲೂರು.ಆಗಸ್ಟ್ 13 ರಂದು ಪ್ರಗತಿಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ ಗೆ ಕರವೇ ಪ್ರವೀಣ್ ಶೆಟ್ಟಿ ಬಣದ ಬೇಲೂರು ತಾಲೂಕು ಅಧ್ಯಕ್ಷ ವಿ ಎಸ್ ಭೋಜೆ ಗೌಡ ವಿರೋಧ ವ್ಯಕ್ತಪಡಿಸಿದ್ದು ,ಯಾವುದೇ ಕಾರಣಕ್ಕೂ ಬೇಲೂರು ಬಂದ್ ಮಾಡದಂತೆ ಸಾರ್ವಜನಿಕರಲ್ಲಿ ಹಾಗೂ ಸಂಘಟನೆಗಳಲ್ಲಿ ಮನವಿ ಮಾಡಿದ್ದಾರೆ .
ಈಗಾಗಲೇ ಸಿ ಎಂ ಡಿಕೆ ಶಿವಕುಮಾರ್ ರವರು ತಮಿಳು ನಾಡಿಗೆ ನೀರು ಬಿಡುವುದಿಲ್ಲವೆಂದು ಸ್ವಷ್ಟಪಡಿಸಿದ್ದರು ಬಂದ್ ಮಾಡುವ ಅವಶ್ಯಕತೆ ಏನಿದೆ ಈಗಾಗಲೇ ವರುಣನ ಅಬ್ಬರ ಎಲ್ಲಾ ಕಡೆಗಳಲ್ಲೂ ಜೋರಾಗಿದ್ದು ಎಲ್ಲಾ ಜಲಾಶಯಗಳು ತುಂಬುವ ಮಟ್ಟಕ್ಕೆ ಬಂದಿದ್ದು ಕುಡಿಯುವ ನೀರಿಗೆ ಅಬಾವ ಆಗಲಾರದು ಪ್ರತಿ ವರ್ಷ ನೀರಿನ ವಿಚಾರದಲ್ಲಿ ಬಂದ್ ಮಾಡುತ್ತಾ ಹೋದರೆ ಪ್ರತಿ ದಿನ ದುಡಿದು ತಿನ್ನುವ ಕೂಲಿಕಾರ್ಮಿಕರು , ಬಡವರು ,ದೀನದಲಿತರು .ಮದ್ಯಮವರ್ಗದವರ ಹೊಟ್ಟೆಯ ಮೇಲೆ ಹೊಡೆದಂತಾಗುತ್ತದೆಯೇ ವಿನಃ ಸಮಸ್ಯೆ ಬಗೆಹರಿಯುವುದಿಲ್ಲ .ಕೊಡಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಕಾವೇರಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಆಗ್ರಹಿಸಿದರು
