ಸಕಲೇಶಪುರದಲ್ಲಿ ಇಂದು ನಡೆದ ಮಲೆನಾಡು ವೀರಶೈವ ಸಮಾಜ ಹಾಗೂ ಅಂಗ ಸಂಸ್ಥೆಗಳಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಚಿವರಾದ ಹೆಚ್ ಕೆ ಕುಮಾರ ಸ್ವಾಮಿಯವರನ್ನು ಸನ್ಮಾನ ಮಾಡಿ ಗೌರವ ನೀಡಲಾಯಿತು.
ವಿಶ್ವ ಗುರು ಸಾಂಸ್ಕೃತಿಕ ನಾಯಕ ಬಸವಣ್ಣರವರ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಹಲವಾರು ಮಂದಿ ಸಹಕಾರ ನೀಡಿದ್ದರು.
ಮಾಜಿ ಸಚಿವರು ಹಾಗೂ ಈ ಕ್ಷೇತ್ರದಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ಹೆಚ್ ಕೆ ಕುಮಾರ ಸ್ವಾಮಿಯವರು ಮಾಡಿದ ಜನಪರ ಕಾರ್ಯವನ್ನು ಗುರುತಿಸಿ ಅವರ ಪರಿಶ್ರಮಕ್ಕೆ ಸಂತಸ ವ್ಯಕ್ತ ಪಡಿಸಲಾಯಿತು.
previous post
next post
