ವರದಿ ರಾಣಿ ಪ್ರಸನ್ನ
ಸಕಲೇಶಪುರದಲ್ಲಿ ಇಂದು ನಡೆದ ವೀರಶೈವ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಪುನೀತ್ ಬನ್ನಳ್ಳಿ ಹಾಗು ಅವರ ಪತ್ನಿಯವರಿಗೆ *”ಧನ ದಾಸೋಹಿ ದಂಪತಿಗಳು “* ಪರಮ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾಯಿತು
ಕದಿವ್ಯ ಸಾನಿಧ್ಯ ಹೊಂದಿದ್ದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು , ಶ್ರೀ ಪುಷ್ಪಗಿರಿ ಸಂಸ್ಥಾನಮಠ ಬೇಲೂರು ಇವರು ಮಾತನಾಡುತ್ತಾ ಪುನೀತ್ ಬನ್ನಳ್ಳಿಯವರ ಸಾಮಾಜಿಕ ಕಾರ್ಯಕ್ಕೆ ಅವರ ದಾನ ಧರ್ಮವನ್ನು ಕಂಡು ಇವರಿಗೆ ಸಕಲೇಶಪುರದ ಎಂ ಎಲ್ ಎ ಇದ್ದಂತೆ ಎಂದು ಮನಸ್ಫೂ
ರ್ತಿಯಾಗಿ ಆಶೀರ್ವದಿಸಿದರು.
ಸಕಲೇಶಪುರದ ಹೃದಯ ಭಾಗದಲ್ಲಿ ವಿರಾಜಮಾನ ವಾಗಿರುವ ದಕ್ಷಿಣ ಕರ್ನಾಟಕದಲ್ಲಿ ಅತ್ಯಂತ ಸುಂದರ ಶ್ರೇಷ್ಠ ವಿಶ್ವಗುರು ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣನವರ ಶ್ರೀ ಕಂಚಿನ ಪ್ರತಿಮೆ ಧಾನಿಗಳಾಗಿ, ಪುತ್ತಳಿ ಲೋಕಾರ್ಪಣೆ ಕಾರ್ಯಕ್ರಮದ ಸಂಪೂರ್ಣ ದಾಸೋಹ ವ್ಯವಸ್ಥೆಯ ಅನುಪಮ ಸೇವೆ ಸಲ್ಲಿಸಿ ನಮ್ಮ ಸಮಾಜಕ್ಕೆ ಅತ್ಯಂತ ಗೌರವ ತಂದುದಕ್ಕಾಗಿ ಹೃದಯ ತುಂಬಿ ಕೃತಜ್ಞತಾ ಪೂರ್ವಕವಾಗಿ ಉದಾರ ಹಸ್ತದಿಂದ ನೆರವು ಪಡೆದ ಶ್ರೀ ಮಲೆನಾಡು ವೀರಶೈವ ಸಮಾಜ ಮತ್ತು ಅಂಗ ಸಂಸ್ಥೆಗಳಿಂದ
03-09-2024 ಮಂಗಳವಾರ ಬ್ಯಾಕರವಳ್ಳಿ ಶ್ರೀ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನೆಡೆದ “ಅಭಿನಂದನಾ” ಸಮಾರಂಭದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಇವರ ದಾನ, ಧರ್ಮ, ಸಂಸ್ಕೃತಿ, ಸಮಾಜ ಸೇವಾ ಕಾರ್ಯ, ನಿಷ್ಠೆಯನ್ನು ಗುರುತಿಸಿ ಅನುಗ್ರಹಿಸಲಾದ ಪರಮ ಪ್ರಶಸ್ತಿ ಧನ ದಾಸೋಹಿ ದಂಪತಿಗಳು ಎಂದು ಇವರಿಗೆ ನೀಡಿ ಗೌರವಿಸಲಾಯಿತು.
