Blog

ಸೆಪ್ಟೆಂಬರ್ 6 ಕ್ಕೆ ಎತ್ತಿನ ಹೊಳೆ ಚಾಲನೆ

ಬಹು ಕೋಟಿ ಮೊತ್ತದ ಎತ್ತಿನ ಹೊಳೆ ಎಂಬ ಪ್ರಕೃತಿ ವಿರೋಧಿ ಹಾಗೂ ಪರಮ ಭ್ರಷ್ಟಾಚಾರದ ಎತ್ತಿನ ಹೊಳೆ ಕಾಮಗಾರಿ ಗೆ ಸೆಪ್ಟೆಂಬರ್ 6 ರಂದು ಚಾಲನೆ ನೀಡಲಾಗುತ್ತಿದೆ.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ರೇ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲು ಆಗಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮ ನಡೆಯುವ ಹೆಬ್ಬನಹಳ್ಳಿ ಗ್ರಾಮದ ಸ್ಥಳವನ್ನು ಪೊಲೀಸ್ ಅಧಿಕಾರಿಗಳು ಪರಿಶೀಲನೆ ಮಾಡಿ ದ್ದಾರೆ.

ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ನೇತ್ರಾವತಿ ನದಿಯ ನೀರನ್ನು ಕೊಂಡೊಯುವ ಈ ಯೋಜನೆ ಪ್ರಕೃತಿ ಗೆ ಸಂಪೂರ್ಣ ಮಾರಕವಾದ ಯೋಜನೆಯಾಗಿದೆ. ಕೋಲಾರ, ಚಿಕ್ಕ ಬಳ್ಳಾಪುರ ಪ್ರದೇಶಕ್ಕೆ ನೀರು ನೀಡುವ ನಿಟ್ಟಿನಲ್ಲಿ ಹಮ್ಮಿ ಕೊಂಡ ಬೃಹತ್ ಯೋಜನೆ ಇದಾಗಿದೆ

ಸಾವಿರಾರು ಎಕ್ರೆ ಕೃಷಿ ಜಮೀನಿನ ಮೂಲಕ ಈ ಯೋಜನೆಯ ಕಾಮಗಾರಿ ಹಾಗೂ ಪೈಪ್ ಲೈನ್ ಹಾದು ಹೋಗಿದೆ.

ಈ ಯೋಜನೆಯ ಹಣದಿಂದ ಹಲವಾರು ಮಂದಿ ಜನ ಪ್ರತಿನಿಧಿಗಳು ತಮ್ಮ ಜೇಬು ತುಂಬಿಸಿ ಕೊಂಡಿದ್ದಾರೆ.

ಈ ಕಾಮಗಾರಿಯ ವೇಗದಿಂದ ಆನೆಗಳು ತಮ್ಮ ಕಾರಿಡಾರ್ ನ ಹಾದಿ ತಪ್ಪಿ ಜನ ಜೀವನದ ಕಡೆಗೆ ನುಗ್ಗಿ ಅಲ್ಲಿನ ವ್ಯವಸ್ಥೆಯನ್ನೇ ಹಾಳು ಮಾಡಿದೆ.

ಈ ಕಾಮಗಾರಿ ಆರಂಭಗೊಂಡು 20 ವರ್ಷಗಳು ಪೂರ್ಣಗೊಂಡಿದೆ. ಈ ಕಾಮಗಾರಿಗೆ ಈಗಾಗಲೇ ಸುಮಾರು12.5 ಸಾವಿರ ಕೋಟಿ ಅನುದಾನ ಮಂಜೂರು ಗೊಂಡಿದ್ದು. ಇನ್ನು ಹೆಚ್ಚುವರಿಯಾಗಿ 10 ಸಾವಿರ ಕೋಟಿ ಅನುದಾನ ಆಡಳಿತಾತ್ಮಕ ಮಂಜೂರಾತಿ ಹಂತದಲ್ಲಿದೆ.

ಪ್ರಯೋಗ ಹಂತದಲ್ಲಿ ಹಲವಾರು ಸಮಸ್ಯೆ ಉಂಟು ಮಾಡಿದ್ದ ಈ ಯೋಜನೆ ಇನ್ನು ಆರಂಭ ಗೊಂಡ ಬಳಿಕ ಇನ್ನೇನು ಸಮಸ್ಯೆ ಮಾಡಲಿದೆ ಎಂದು ಕಾದು ನೋಡ ಬೇಕಿದೆ

Related posts

ಲಂಡನ್ ಕಾಫಿ ಸಭೆಯಲ್ಲಿ ಡಾ. ಮೋಹನ್ ಕುಮಾರ್

Bimba Prakashana

ನದಿಗೆ ಉರುಳಿದ ಕಾರು

Bimba Prakashana

ಅರಸೀಕೆರೆ ಅಪ್ಪೇನ ಹಳ್ಳಿ ಸರಕಾರಿ ಶಾಲೆಗೆ ಕೊಠಡಿಯ ಸಮಸ್ಯೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More