ಸಕಲೇಶಪುರ ಬಾಗೆ ಬಳಿ ಸರಕಾರಿ ಕೆರೆಯ ಜಾಗಕ್ಕೆ ಬೇಲಿ ಹಾಕಿ ಒತ್ತುವರಿ ಮಾಡಿರುವ ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ರೇಖಾ ಗೋಪಿನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಒತ್ತುವರಿ ಘಟನೆ ಕಳೆದ ಒಂದು ತಿಂಗಳಿಂದ ನಡೆಯುತ್ತಿದೆ. ನೀರು ತುಂಬಿ ಜನರಿಗೆ ಆಸರೆ ಆಗಬೇಕಾದ ಈ ಕೆರೆಯನ್ನು ಒತ್ತುವರಿ ಮಾಡಿರುವ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಮಲ್ನಾಡ್ ಶಾಡೋ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸರಕಾರಿ ಜಾಗ ಒತ್ತುವರಿ ಮಾಡಲು ಅವಕಾಶ ಕೊಟ್ಟವರು ಯಾರು ಎಂಬ ಬಗ್ಗೆ ತನಿಖೆ ಆಗಬೇಕು ಎಂಬ ಒತ್ತಾಯ ಮಾಡಿದ್ದಾರೆ.
ಹೋರಾಟದ ಪ್ರಸ್ತಾಪ
ಈ ಜಾಗ ಒತ್ತುವರಿ ಪ್ರಕ್ರಿಯೆ ಬಗ್ಗೆ ಮಲ್ನಾಡ್ ಶಾಡೋ ಡಿಜಿಟಲ್ ಮಾಧ್ಯಮ ಜೊತೆಗೆ ಮಾಹಿತಿ ಪಡೆದಿರುವ ಸಂಘಟನೆಗಳು ಸ್ಥಳ ತೆರವು ಮಾಡದಿದ್ದರೆ ಧರಣಿ ಮಾಡುವುದಾಗಿ ತಿಳಿಸಿದ್ದಾರೆ
previous post
next post
