ಬಿಸಲೇ ಘಾಟಿಯಲ್ಲಿ ನಡೆದ ವ್ಯಾನ್ ಅಪಘಾತ ದಲ್ಲಿ ಓರ್ವ ಮೃತ ಪಟ್ಟಿದ್ದಾರೆ
ಸಕಲೇಶಪುರ ತಾಲೂಕಿನ
ವನಗೂರಿನ ವರ ಮತ್ತು ಸುಬ್ರಹ್ಮಣ್ಯ ದ ಏನೇ ಕಲ್ಲು ಗ್ರಾಮದ ವಧುವಿನ ಜೊತೆ ಆದಿ ಸುಬ್ರಮಣ್ಯದಲ್ಲಿ ವಿವಾಹ ನಿಗದಿಯಾಗಿತ್ತು.
ವರ ಹಿಂದಿನ ದಿನವೇ ಸುಬ್ರಹ್ಮಣ್ಯಕ್ಕೆ ಹೋಗಿದ್ದರು
ಇಂದು ಬೆಳಗ್ಗೆ ಸಂಬಂಧಿಕರು ಮತ್ತು ಊರಿನ ಜನರನ್ನು ಸುಬ್ರಹ್ಮಣ್ಯಕ್ಕೆ ತೆರಳಲು ಮಿನಿ ವ್ಯಾನ್ ನಿಗದಿ ಮಾಡಲಾಗಿತ್ತು
ಈ ಮಿನಿ ಬಸ್
ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ಬಿಸಿಲೆ ಘಾಟ್ ತಿರುವಿನಲ್ಲಿ ವನಗೂರಿನಿಂದ ಸುಬ್ರಮಣ್ಯಕ್ಕೆ ತೆರಳುವಾಗ ಪಲ್ಟಿ ಹೊಡೆದ ವ್ಯಾನ್ ನಲ್ಲಿದ್ದ ಶಿವರಾಜ್ ವಣಗೂರು ಎಸ್ಟೇಟ್ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ನಾಲ್ಕು ಜನರಿಗೆ ಗಂಭೀರ ಗಾಯ ವಾಗಿದ್ದು ಹದಿನೈದು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
ಎಲ್ಲಾ ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಯಶಳೂರು ಪೊಲೀಸ್ ಮತ್ತು ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಸ್ಥಳಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದಾರೆ.
previous post
