ಸನಾತನ ಸೇವಾ ಟ್ರಸ್ಟ್, ಅಧ್ಯಕ್ಷರಾಗಿ ಆರ್.ಬಾಲರಾಜು ಆಯ್ಕೆ.
ಸಕಲೇಶಪುರ: ತಾಲೂಕಿನಲ್ಲಿ ಹಲವು ಸೇವಾ ಕಾರ್ಯಗಳನ್ನು ಮಾಡಿಕೊಂಡು ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿರುವ ಸನಾತನ ಸೇವಾ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಆರ್. ಬಾಲರಾಜು ಆಯ್ಕೆಯಾಗಿದ್ದಾರೆ. ಇವರನ್ನು 1/11/25 ರಂದು ನಡೆದ ಟ್ರಸ್ಟ್ ನ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಕಾರ್ಯದರ್ಶಿಯಾಗಿ ಹೆಬ್ಬೆನಹಳ್ಳಿ ಸಂದೇಶ್, ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಅಗಲಟ್ಟಿ, ಪುಟ್ಟಸ್ವಾಮಿಗೌಡ ಹೊಸೂರು, ಸಹ ಕಾರ್ಯದರ್ಶಿಯಾಗಿ ಅನಿಲ್ ಸಂಪಗೋಡು ಆಯ್ಕೆಯಾಗಿದ್ದಾರೆ.
