ಸಕಲೇಶಪುರ : ಕರವಸೂಲಿಗಾರ
ಕೇಶವಯ್ಯ ನಿವೃತ್ತಿ. ಕುನಿಗನಹಳ್ಳಿ ನಿರಂತರ ಯೋಗ ಕೇಂದ್ರದ ವತಿಯಿಂದ ಅದ್ದೂರಿ ಬಿಳ್ಕೊಡುಗೆ :
ಕುನಿಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 13 ವರ್ಷಗಳ ಕಾಲ ಕಚೇರಿ ಸಹಾಯಕರಾಗಿ 13 ವರ್ಷಗಳ ಕಾಲ ಕರವಸೂಲಿಗಾರರಾಗಿ, ಸದರಿ ಅವಧಿಯಲ್ಲಿ ಕಚೇರಿ ಕಾರ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ, ಚುನಾಯಿತ ಪ್ರತಿನಿಧಿಗಳಿಂದ, ಸಾರ್ವಜನಿಕರಿಂದ, ಅಧಿಕಾರಿ ವರ್ಗದವರಿಂದ, ಸುತ್ತಮುತ್ತಲಿನ ಗ್ರಾಮಸ್ಥರಿಂದ ಮೆಚ್ಚುಗೆ ಪಡೆದ ಇವರಿಗೆ ಕುಣಿಗನಹಳ್ಳಿ ನಿರಂತರ ಯೋಗ ಕೇಂದ್ರದ ವತಿಯಿಂದ ಅದ್ದೂರಿ ಬೀಳ್ಕೊಡುಗೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು .
ಈ ಸಂದರ್ಭದಲ್ಲಿ ಕುನಿಗನಹಳ್ಳಿ ಯೋಗ ಕೇಂದ್ರದ ಅಧ್ಯಕ್ಷರು ಕೆ ಎನ್ ಹರೀಶ್, ಯೋಗ ಗುರೂಜಿ ವೆಂಕಟೇಶ್,ಗ್ರಾಮ ಪಂಚಾಯ್ತಿ ಸದಸ್ಯಇಬ್ರಾಹಿಂ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಸುರೇಶ್, ಎಚ್ ಕೆ ಮಲ್ಲೇಶ್, ಮಹೇಶ್, ಶಂಕರಗೌಡ, ಮತ್ತಿತರರೂ ಉಪಸಿತರಿದ್ದರು.
