ನಾಗೇಶ್ ಎಂ ಎಚ್ ಮಾಗೇರಿ.
ಸಕಲೇಶಪುರದಲ್ಲಿ ಈ ಬಾರಿ ಎಷ್ಟನೇ ವರ್ಷದ ವಿಜಯೋತ್ಸವ!!!*
*ಸಕಲೇಶಪುರದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ನಡೆದುಬಂದ ಇತಿಹಾಸವನ್ನೊಮ್ಮೆ ತಿಳಿಯೋಣವೇ…!!?*

ಬಂಧುಗಳೇ,
ದೇಶದೆಲ್ಲೆಡೆ ಜನವರಿ 1 ಹೊಸ ವರ್ಷದ ಸಡಗರವಾದರೆ ಅದೇ ದಿನ ನಾಡಿನ ಶೋಷಿತರ ಸ್ವಾಭಿಮಾನದ ಹಬ್ಬ ಭೀಮ ಕೋರೆಗಾಂವ್ ಯುದ್ಧದ ಗೆಲುವಿನ ಸಂಭ್ರಮಾಚರಣೆಯ ಮಹತ್ತರವಾದ ಸ್ಮರಣೀಯ ದಿನವೂ ಕೂಡ.ಆ ದಿನವನ್ನು ಬಹಳ ವಿಜೃಂಭಣೆಯಿಂದ ಹಲಾವರು ಭಾಗಗಳಲ್ಲಿ ಆಚರಣೆ ಮಾಡಲಾಗುತ್ತದೆ. ಅದರಂತೆ ಮಹಾರಾಷ್ಟ್ರದ ಕೋರೆಗಾಂವ್ ನಲ್ಲಿ 200ನೇ ವರ್ಷದ ಸಂಭ್ರಮಾಚರಣೆಯ ಸಂಧರ್ಭದಲ್ಲಿ ನಡೆದ ಗಲಭೆಯ ಪರಿಣಾಮವಾಗಿ ಕೋರೆಗಾಂವ್ ಇತಿಹಾಸ ದೇಶಾದ್ಯಂತ ಹರಡಲು ಪ್ರಾರಂಭಿಸಿತು.
ಅದೇ ರೀತಿಯಾಗಿ ನಮ್ಮ ಸಕಲೇಶಪುರ ತಾಲ್ಲೂಕಿನಲ್ಲಿ *ಮೊಟ್ಟ ಮೊದಲ ಬಾರಿಗೆ ಬಿ.ವಿ.ಎಸ್ – ಇಂದಿನ ಭಾರತೀಯ ವಿದ್ಯಾರ್ಥಿ ಸಂಘದ* ನೇತೃತ್ವದಲ್ಲಿ *200ನೇ ವರ್ಷದ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು 2018 ರ ಜನವರಿ 3* ರಂದು ಸಕಲೇಶಪುರ ಪಟ್ಟಣದ ಹೇಮಾವತಿ ಸೇತುವೆ ಇಂದ ಮುಖ್ಯರಸ್ತೆಯ ಮಾರ್ಗವಾಗಿ ಪುರಭವನದ ವರೆಗೂ ದೀಪದ ಮೇಣದ ಬತ್ತಿಗಳನ್ನು ಹಿಡಿದು ಮೆರವಣಿಗೆ ಮಾಡುವ ಮೂಲಕ ಕೋರೆಗಾಂವ್ ಯುದ್ಧದಲ್ಲಿ ಹೋರಾಡಿದ 500 ಮಹಾರ್ ವೀರ ಸೈನಿಕರಿಗೆ ಗೌರವ ಸೂಚಿಸಿ ವಿಜಯೋತ್ಸವ ಆಚರಿಸಲಾಯಿತು. ಈ ಒಂದು ಕಾರ್ಯಕ್ರಮವು ಬಹುಜನ ಚಳುವಳಿಯ ಯುವಮುಖಂಡರಾದ ಎಂ.ಆರ್ ವೇಣು(ವಕೀಲರು)ರವರು ಹಾಗೂ ತಮ್ಮಯ್ಯ ಕೆ.ಟಿ-ಕೆಸಗಾನಹಳ್ಳಿ ರವರ ಮಾರ್ಗದರ್ಶನದಲ್ಲಿ ಅಂದಿನ ಬಿ.ವಿ.ಎಸ್ ಸಂಯೋಜಕರಾದ ಮಧು ರವರ ನೇತೃತ್ವದಲ್ಲಿ ಅಧ್ಯಕ್ಷರಾದ ಸತೀಶ್ – ಬೈಕರೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಹಾಗೆಯೆ ಈ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಕಾಡಪ್ಪರವರು, ಜೈ ಭೀಮ್ ಮಂಜು ರವರು ವಿಷಯ ಮಂಡಿಸಿದರು.ಅಂದಿನ ಕಾರ್ಯಕ್ರಮಕ್ಕೆ ವಳಲಹಳ್ಳಿ ವಿರೇಶ್ ರವರು ಮೇಣದ ಬತ್ತಿಗಳನ್ನು ದಾನವಾಗಿ ನೀಡಿದ್ದರು. ಹಲವಾರು ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅದರಂತೆ *201 ನೇ ವಿಜಯೋತ್ಸವ (ಸಕಲೇಶಪುರದಲ್ಲಿ ಎರಡನೇ ವರ್ಷ) ಇದೆ ಬಿ.ವಿ.ಎಸ್ ವತಿಯಿಂದ 2019 ರ ಜನವರಿ 1* ರಂದು ಅಂದಿನ ಬಿ.ಎಸ್.ಪಿ ಪಕ್ಷದ ಅಧ್ಯಕ್ಷರಾಗಿದ್ದ ಎಂ.ಆರ್ ವೇಣು(ವಕೀಲರು) ರವರ ನೇತೃತ್ವದಲ್ಲಿ ಅಂದಿನ ಬಿ.ವಿ.ಎಸ್ ಅಧ್ಯಕ್ಷರಾಗಿದ್ದ ಲೋಕೇಶ್ – ಬೈರಹಳ್ಳಿ ರವರ ಅಧ್ಯಕ್ಷತೆಯಲ್ಲಿ ಪಟ್ಟಣದ ಹಳೇ ತಾಲ್ಲೂಕು ಕಛೇರಿ ಆವರಣದಲ್ಲಿ ಕಾರ್ಯಕ್ರಮ ಜರುಗಿತು.ಈ ಕಾರ್ಯಕ್ರದಲ್ಲಿ ಬಿ.ವಿ.ಎಸ್ ಜಿಲ್ಲಾ ಸಂಯೋಜಕರಾದ ಯೋಗೇಶ್ -ವಕೀಲರು ಮುಖ್ಯಭಾಷಣಕಾರರಾಗಿದ್ದರು ಮತ್ತು ಬಹುಜನ ಚಳುವಳಿ ಮುಖಂಡರಾಗಿದ್ದ ಸ್ಟೀವನ್ ಪ್ರಕಾಶ್ ರವರು ಸೇರಿದಂತೆ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಮುಖಂಡರುಗಳಾದ ಲಕ್ಕಪ್ಪ, ನಲ್ಲುಲ್ಲಿ ಈರಪ್ಪ, ಬೈರಪ್ಪ, ಕಾಡಪ್ಪ ರವರುಗಳು ಸೇರಿದಂತೆ ಮುಖಂಡರಾದ ಬೈಕೆರೆ ದೇವರಾಜ್, ಆಲೂರಿನ ಮೋಹನ್ ಕಾಡ್ಲೂರು ರವರುಗಳು ವೇದಿಕೆಯಲ್ಲಿದ್ದರು.
ಹಾಗೆಯೇ *202ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮ (ಸಕಲೇಶಪುರದಲ್ಲಿ 3ನೇ ವರ್ಷ)* ಈ ಒಂದು ಕಾರ್ಯಕ್ರಮವನ್ನು ಸಾಂಸ್ಕೃತಿಕ ದಿನವನ್ನಾಗಿ ಆಚರಣೆ ಮಾಡುವಂತೆ ನಿರ್ಣಯಿಸಿ *2020 ರ ಜನವರಿ 3* ರಂದು ಪಟ್ಟಣದ ಪುರಭವನದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ ಸಮಿತಿ ಎಂಬ ಬ್ಯಾನರ್ ಅಡಿ ಎಂ.ಆರ್ ವೇಣುರವರ ನೇತೃತ್ವದಲ್ಲಿಯೇ ಮಂಜು ದೊಡ್ಮನೆ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನೆರವೇರಿತು.ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಅಣ್ಣ ಎನ್.ಮಹೇಶ್ ರವರು ಹಾಗೂ ತಾಲ್ಲೂಕಿನ ದಲಿತ ಮುಖಂಡರುಗಳಾದ ಲಕ್ಕಪ್ಪ, ನಲ್ಲುಲ್ಲಿ ಈರಪ್ಪ, ಬೈರಪ್ಪ, ದೊಡ್ಡಯ್ಯ, ಅಣ್ಣಯ್ಯ, ಎಸ್.ಎನ್ ಮಲ್ಲಪ್ಪ, ಕಾಡಪ್ಪ, ಸಣ್ಣಸ್ವಾಮಿ, ಪರ್ವತಯ್ಯ, ಹಾಲಿ ಶಾಸಕರಾದ ಸಿಮೆಂಟ್ ಮಂಜು, ವಳಲಹಳ್ಳಿ ವಿರೇಶ್, ಮಳಲಿ ಶಿವಣ್ಣ, ಕೊಮಾರಯ್ಯ(pdo), ರಮೇಶ್ ದೊಡ್ಡನಾಗರ, ಯಡೇಹಳ್ಳಿ ಆರ್.ಮಂಜುನಾಥ್, ಗೋವಿಂದರಾಜ್ ನಿಡಿಗೆರೆ, ಕೌಡಳ್ಳಿ ತಿಮ್ಮಯ್ಯರವರು, ಅಂದಿನ ಬಿ.ವಿ.ಎಸ್ ಸಂಯೋಜಕರಾದ ಗುರುಪ್ರಶಾಂತ್ ಸೇರಿದಂತೆ ಪತ್ರಕರ್ತರು ಹಾಗೂ ಮುಖಂಡರುಗಳಾದ ಸ್ಟೀವನ್ ಪ್ರಕಾಶ್, ಹೆತ್ತೂರು ನಾಗರಾಜ್, ಜೈ ಭೀಮ್ ಮಂಜು, ಮೆಹಬೂಬ್ ಪಾಷ,ನವೀನ್ ಸದಾ ರವರುಗಳು ಹಾಗೂ ಹಲವು ಮುಖಂಡರು ವೇದಿಕೆಯಲ್ಲಿದ್ದರು.
ಹಾಗೆಯೇ *203ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮ(ಸಕಲೇಶಪುರದಲ್ಲಿ 4 ನೇ ವರ್ಷ)* *2021ರ ಜನವರಿ 1* ರಂದು ಹಿಂದಿನ ವರ್ಷದಂತೆಯೇ ಭೀಮ ಕೋರೆಗಾಂವ್ ವಿಜಯೋತ್ಸವ ಸಮಿತಿ ಬ್ಯಾನರ್ ಅಡಿಯಲ್ಲಿ ಎಂ.ಆರ್ ವೇಣು ರವರ ನೇತೃತ್ವದಲ್ಲಿ ದೊಡ್ಡನಾಗರ ಗ್ರಾಮದ ದಿವಾಕರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಿ.ಪಿ.ಎಸ್ ರಾಜ್ಯಾಧ್ಯಕ್ಷರು ಹಾಗೂ ಹೈ ಕೋರ್ಟ್ ವಕೀಲರಾದ ಪ್ರೊ.ಹರಿರಾಂ ರವರು ಮತ್ತು ಅಂದು ಪುರಸಭಾ ಅಧ್ಯಕ್ಷರಾಗಿದ್ದ ಕಾಡಪ್ಪರವರು, ಅಂದಿನ ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ ರವರು ಸೇರಿದಂತೆ ತಾಲ್ಲೂಕಿನ ದಲಿತ ಮುಖಂಡರುಗಳಾದ ಲಕ್ಕಪ್ಪ, ನಲ್ಲುಲ್ಲಿ ಈರಪ್ಪ, ಬೈರಪ್ಪ, ದೊಡ್ಡಯ್ಯ, ಅಣ್ಣಯ್ಯ, ಎಸ್.ಎನ್ ಮಲ್ಲಪ್ಪ, ಕಾಡಪ್ಪ, ಸಣ್ಣಸ್ವಾಮಿ, ಪರ್ವತಯ್ಯ, ಹಾಲಿ ಶಾಸಕರಾದ ಸಿಮೆಂಟ್ ಮಂಜು, ವಳಲಹಳ್ಳಿ ವಿರೇಶ್, ಮಳಲಿ ಶಿವಣ್ಣ, ಕೊಮಾರಯ್ಯ(pdo), ರಮೇಶ್ ದೊಡ್ಡನಾಗರ, ಯಡೇಹಳ್ಳಿ ಆರ್.ಮಂಜುನಾಥ್, ಗೋವಿಂದರಾಜ್ ನಿಡಿಗೆರೆ, ಅಂದಿನ ಭೀಮ್ ಆರ್ಮಿ ಅಧ್ಯಕ್ಷರಾಗಿದ್ದ ವಿಕ್ರಂ ಸಕ್ಪಾಲ್ ರವರು ಮತ್ತು ವಿಶೇಷವಾಗಿ ಮುಸ್ಲಿಂ ಧರ್ಮಗುರು ಇಬ್ರಾಹಿಂ ಮುಸ್ಲಿಯಾರ್, ಕ್ರೈಸ್ತ ಗುರುಗಳಾದ ಫಾಸ್ಟರ್ ಯೇಸಾಯ ಸೇರಿದಂತೆ ಪತ್ರಕರ್ತರು ಹಾಗೂ ಮುಖಂಡರುಗಳಾದ ಸ್ಟೀವನ್ ಪ್ರಕಾಶ್, ಹೆತ್ತೂರು ನಾಗರಾಜ್, ಜೈ ಭೀಮ್ ಮಂಜು, ಮೆಹಬೂಬ್ ಪಾಷ,ನವೀನ್ ಸದಾ ರವರುಗಳು ಹಾಗೂ ಹಲವು ಮುಖಂಡರು ವೇದಿಕೆಯಲ್ಲಿದ್ದರು.
ಅದರಂತೆ *204ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮ ( ಸಕಲೇಶಪುರದಲ್ಲಿ5 ನೇ ಬಾರಿಗೆ)* *2022ರ ಜನವರಿ 1* ರಂದು ಬಹಳ ಅದ್ದೂರಿಯಾಗಿ ಕಾರ್ಯಕ್ರಮ ನಿರ್ವಹಣೆ ಮಾಡಲು ಮತ್ತು ಹಣಕಾಸು ವಿವರಗಳನ್ನು ಜನತೆಗೆ ನೀಡಲು ತಾಲ್ಲೂಕಿನ ಪ್ರವಾಸಿತಾಣವಾದ ಹೊಸಳ್ಳಿ ಬೆಟ್ಟದಲ್ಲಿ ಎಂ.ಆರ್ ವೇಣು, ಸ್ಟೀವನ್ ಪ್ರಕಾಶ್ ರವರ ನೇತೃತ್ವದಲ್ಲಿ ಸಭೆ ನಡೆಸಲಾಗಿ ಅಧಿಕೃತವಾಗಿ ಸಮಿತಿ ನೊಂದಾಯಿಸೋಣವೆಂಬ ಸರ್ವರ ಅಭಿಪ್ರಾಯ ಪಡೆದು ಶಾಂತರಾಜ್-ಹೆನ್ನಲಿ ರವರನ್ನು ಅಧ್ಯಕ್ಷರನ್ನಾಗಿ, ಗೋಪಾಲ್ ಮಳಲಿರವರನ್ನು ಪ್ರ.ಕಾರ್ಯದರ್ಶಿಯಾಗಿ ತೀರ್ಮಾನಿಸಿ” ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿ ಹಾಗೂ ಕಲ್ಚರಲ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ)” ಎಂದು ಕೋರೆಗಾಂವ್ ಯುದ್ದದಲ್ಲಿ ಮಡಿದ 22 ಜನರ ಸ್ಮರಣಾರ್ಥವಾಗಿ ಅಧ್ಯಕ್ಷರು ಮತ್ತು ಪ್ರ.ಕಾರ್ಯದರ್ಶಿ ಒಳಗೊಂಡಂತೆ 22 ಜನರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಿ ನೊಂದಾಯಿಸಲಾಯಿತು. ನಂತರ ತಾಲ್ಲೂಕಿನಾದ್ಯಂತ ಸಂಸ್ಥಾಪಕ ಉಸ್ತುವಾರಿಗಳಾಗಿ ಎಂ.ಆರ್ ವೇಣು, ಸಂಯೋಜಕರಾಗಿ ಸ್ಟೀವನ್ ಪ್ರಕಾಶ್, ಅಧ್ಯಕ್ಷರಾಗಿ ಶಾಂತರಾಜ್ ಹೆನ್ನಲಿ, ಪ್ರ.ಕಾರ್ಯದರ್ಶಿಯಾಗಿ ಗೋಪಾಲ್ ಮಳಲಿ ರವರ ಮುಂದಾಳತ್ವದಲ್ಲಿ ಎಲ್ಲರೂ ಅಸಾಧ್ಯವೆಂದು ಅನುಮಾನಿಸುತ್ತಿದ್ದ ಭೀಮ ಕೋರೆಗಾಂವ್ ವಿಜಯಸ್ತಂಭದ ಮಾದರಿ ರಥವನ್ನು ಎಂ.ಆರ್ ವೇಣುರವರ ಕಲ್ಪನೆಯಂತೆ ಸ್ಟೀವನ್ ಪ್ರಕಾಶ್ ಸಹಕಾರದೊಂದಿಗೆ ಸಾಧ್ಯ ಮಾಡಿ ಪಟ್ಟಣದ ರಾಜಬೀದಿಯಲ್ಲಿ ವಾದ್ಯಗೋಷ್ಠಿ, ಡಿ.ಜೆ, ಜಾನಪದ ಕಲಾತಂಡಗಳೊಂದಿಗೆ ಎಳೆದು ಸಂಭ್ರಮಿಸಲಾಯಿತು.ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಾಯಕನಟರಾದ ಚೇತನ್ ಅಹಿಂಸಾ ಹಾಗೂ ಬಹುಜನ ಚಳುವಳಿಯ ರಾಜ್ಯ ಮುಖಂಡರಾದ ಶ್ರೀನಿವಾಸ್ ರವರು ಆಗಮಿಸಿದ್ದರು. ಈ ಒಂದು ಕಾರ್ಯಕ್ರಮದಲ್ಲಿ ಕಳೆದ ವರ್ಷದಲ್ಲಿ ಭಾಗಿಯಾಗಿದ್ದ ಮುಖಂಡರು,ಅತಿಥಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು. ಮತ್ತು ಈ ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಗಳೊಂದಿಗೆ ಹಿರಿಯ ಮುಖಂಡರುಗಳಾದ ಎಸ್.ಎನ್ ಮಲ್ಲಪ್ಪ, ಬ್ಯಾಗಡಹಳ್ಳಿ ರಾಮಚಂದ್ರರಾವ್, ನಲ್ಲುಲ್ಲಿ ಈರಪ್ಪ, ಹೆತ್ತೂರು ದೊಡ್ಡಯ್ಯ, ನಿವೃತ್ತ ಪಿ.ಡಿ.ಓ ಕೊಮಾರಯ್ಯ ರವರುಗಳನ್ನು ಎಲ್ಲಾ ಮುಖಂಡರ ಪರವಾಗಿ ಕೂರಿಸಲಾಗಿತ್ತು ಹಾಗೂ ಸಂಸ್ಥೆಯ ಹಿರಿಯರು ಮತ್ತು ಉಪಾಧ್ಯಕ್ಷರಾಗಿದ್ದ ಗಂಗಾಧರ್ ಈರಣ್ಣಪೇಟೆ ಹಾಗೂ ರಥಕ್ಕೆ ದಾನಿಗಳಾಗಿದ್ದ ಉದ್ಯಮಿ ಸೋಮಶೇಖರ್ ಶಿಡಿಗಳಲೆ ರವರನ್ನು ಕೂಡ ಕೂರಿಸಲಾಗಿತ್ತು. ಅದೇ ಸಮಯದಲ್ಲಿ ಬಾಬಸಾಹೇಬರ ಪುತ್ಥಳಿ ನಿರ್ಮಾಣ ಮಾಡಿ ಧರಣಿ ಹೋರಾಟ ನಡೆಯುತ್ತಿದ್ದ ಕಾರಣ ಹಲವಾರು ಮುಖಂಡರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಹಕಾರ ನೀಡಲು ಸಾಧ್ಯವಾಗಿರಲಿಲ್ಲವೆಂಬುದು ಕೂಡ ಗಮನಾರ್ಹ

.
*205 ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮ (ಸಕಲೇಶಪುರದಲ್ಲಿ 6ನೇ ಬಾರಿಗೆ) 2023 ಜನವರಿ 1* ರಂದು ಭೀಮ ಕೋರೆಗಾಂವ್ ವಿಜಯೋತ್ಸವ ಸಮಿತಿ ಹಾಗೂ ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಎಂ.ಆರ್ ವೇಣು ರವರ ಮುಂದಾಳತ್ವದಲ್ಲಿಯೇ ಗೋಪಾಲ್ ಎಂ.ಆರ್ ಮಳಲಿ ರವರ ಅಧ್ಯಕ್ಷತೆ ಹಾಗೂ ಶಾಂತರಾಜ್ ಹೆನ್ನಲಿ ರವರ ಸಂಯೋಜಕತ್ವದಲ್ಲಿ, ನಾಗೇಶ್ ಎಂ.ಹೆಚ್ -ಮಾಗೇರಿ ರವರ (ಪ್ರ.ಕಾರ್ಯದರ್ಶಿ) ರವರ ಸಹಭಾಗಿತವದಲ್ಲಿ ಪಟ್ಟಣದ ಎಸ್.ಪಿ ರಸ್ತೆಯಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಹಿಂದಿನ ವರ್ಷದಂತರ ರಾಜಬೀದಿಯಲ್ಲಿ ಮಾದರಿ ರಥ ಎಳೆದು ಅದ್ದೂರಿ ಕಾರ್ಯಕ್ರಮ ನಡೆಸಲಾಯಿತು. ಇದೇ ವರ್ಷ ಹಿಂದಿನ ವರ್ಷ ವೇದಿಕೆಯಲ್ಲಿ ಕಾಣದೆ ಇದ್ದ ಪರಿಣಾಮವೇನೋ!!
ಇನ್ನೊಂದು ಬ್ಯಾನರ್ ಅಡಿ ಅದೇ ದಿನ ನಲ್ಲುಲ್ಲಿ ಈರಪ್ಪರವರ ಅಧ್ಯಕ್ಷತೆಯಲ್ಲಿ ಪ.ಜಾತಿ ಪಂಗಡಗಳ ಒಕ್ಕೂಟ ಬ್ಯಾನರ್ ಅಡಿ ಕಾರ್ಯಕ್ರಮ ಮಾಡಿದ್ದರ ಪರಿಣಾಮ ಸಮಾಜದಲ್ಲಿ ಗೊಂದಲ ಮೂಡಿದಂತು ನಿಜ.
*206 ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮ ( ಸಕಲೇಶಪುರದಲ್ಲಿ 7ನೇ ಬಾರಿಗೆ) 2024 ರ ಜನವರಿ 1* ಸಕಲೇಶಪುರದ ಹಿರಿಯ ಮುಖಂಡರ ಸಮ್ಮುಖದಲ್ಲಿ ಎರಡೂ ಸಮಿತಿಯವರನ್ನು ಕೂಡ ಕರೆದು ಅಭಿಪ್ರಾಯ ಪಡೆದು ಚರ್ಚಿಸಲಾಗಿ ಒಂದೇ ವೇದಿಕೆಯಲ್ಲಿ ಎರಡು ಸಮಿತಿಯ ಹೆಸರನ್ನು ಹಾಕಿ, ನಲ್ಲುಲ್ಲಿ ಈರಪ್ಪರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಒಂದೇ ರಥವನ್ನು ಎಳೆದು ಅದ್ದೂರಿಯಾಗಿ ನಡೆಸಲಾಯಿತು.ಆ ಸಂಧರ್ಭದಲ್ಲಿ ಗಂಗಾಧರ್ – ಈರಣ್ಣಪೇಟೆ ರವರು ಟ್ರಸ್ಟ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.ಪ್ರ.ಕಾರ್ಯದರ್ಶಿಯಾಗಿ ನಾನು,ಸಂಯೋಜಕರಾಗಿ ಶಾಂತರಾಜ್ ಹೆನ್ನಲಿರವರು ಜವಬ್ದಾರಿ ವಹಿಸಿದ್ದೆವು.
*207 ನೇ ವರ್ಷದ ವಿಜಯೋತ್ಸವ (ಸಕಲೇಶಪುರದಲ್ಲಿ 8 ನೇ ಬಾರಿಗೆ)* ಕಾರ್ಯಕ್ರಮ ಮತ್ತದೆ ಗೊಂದಲಗಳ ನಡುವೆ ಶುರುವಾಗಿ ಕಾರ್ಯಕ್ರಮಕ್ಕೆ ಮೂರ್ನಾಲ್ಕು ದಿನಗಳಿರುವಾಗ ಮತ್ತೆ ಎರಡು ಸಮಿತಿಯ ಹೆಸರಿನ ಬ್ಯಾನರ್ ಅಡಿಯಲ್ಲಿ *2025ರ ಜನವರಿ 1* ನಲ್ಲುಲ್ಲಿ ಈರಪ್ಪರವರ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಘೋತ್ತಮ್ ಹೊ.ಬ, ಜ್ಞಾನ ಪ್ರಕಾಶ್ ಸ್ವಾಮೀಜಿ ರವರು ಆಗಮಿಸಿದ್ದರು. ಆಗಿನ ಸಂಧರ್ಭದಲ್ಲಿಯೂ ಗಂಗಾಧರ್-ಈರಣ್ಣಪೇಟೆ ರವರು ಟ್ರಸ್ಟ್ ನ ಅಧ್ಯಕ್ಷರಾಗಿ, ನಾನು ಪ್ರ.ಕಾರ್ಯದರ್ಶಿಯಾಗಿ,ಸೋಮಯೋಜಕರಾಗಿ ಶಾಂತರಾಜ್ ಹೆನ್ನಲಿ ರವರು ಜವಬ್ದಾರಿ ವಹಿಸಿದ್ದೆವು.

*208 ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮ (ಸಕಲೇಶಪುರ ದಲ್ಲಿ 9 ನೇ ಬಾರಿಗೆ)* ಮತ್ತೆ ಸಂಪೂರ್ಣವಾಗಿ ಭೀಮ ಕೋರೆಗಾಂವ್ ವಿಜಯೋತ್ಸವ ಸಮಿತಿ ಹಾಗೂ ಕಲ್ಚರಲ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ)” ವತಿಯಿಂದ *2026 ರ ಜನವರಿ 1 ರಂದು* ನಡೆಯುತ್ತಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷ್ಮಣ್ ಕೀರ್ತಿ ರವರು ವಹಿಸಿಕೊಂಡಿದ್ದಾರೆ. ಈ ಸಾಲಿನ ಟ್ರಸ್ಟ್ ನ ಅಧ್ಯಕ್ಷರಾಗಿ ರಾಜಶೇಖರ್-ನೀಕನಹಳ್ಳಿ, ಪ್ರ.ಕಾರ್ಯದರ್ಶಿಯಾಗಿ ಪುನೀತ್ ಗೊಳಗೊಂಡೆ, ಸಂಯೋಜಕರಾಗಿ ಶಾಂತರಾಜ್-ಹೆನ್ನಲಿ, ಗೋಪಾಲ್ ಮಳಲಿ ರವರು ಜವಬ್ದಾರಿ ವಹಿಸಿದ್ದಾರೆ.
ಆದರೆ ಈ ಬಾರಿಯೂ ಸಹ ಹಲವಾರು ಗೊಂದಲಗಳು ಸಾರ್ವಜನಿಕವಾಗಿ ಚರ್ಚೆಯಲ್ಲಿದ್ದು ಕಾರ್ಯಕ್ರಮ ನಿರ್ವಹಣೆ ಮಾಡುವವರು ಇದಾಗಬಾರದು ಎಂದು ಹೇಳುವ ಜನರ ಅಭಿಪ್ರಾಯವನ್ನು ಮನಗಂಡು ತಿದ್ದಿ ನಡೆಯುವ ಪ್ರಯತ್ನ ಮಾಡುವುದು ಬಹಳ ಸೂಕ್ತ ಎಂದೆನಿಸುತ್ತಿದೆ.
ಹಾಗೆಯೇ ಈ ಒಂದು ಕಾರ್ಯಕ್ರಮ ಈ ಮಟ್ಟಕ್ಕೆ ಬರಲು ಬಹಳ ಶ್ರಮ ವಹಿಸಿದ ಹಲವಾರು ಜನರು ಇಂದು ಸಂಬಂಧವಿಲ್ಲದಂತೆ ಇರುವುದು ಮತ್ತು ಅಂತಹ ವ್ಯಕ್ತಿಗಳನ್ನು ಗುರುತಿಸದೇ ಕಾರ್ಯಕ್ರಮ ಮಾಡುತ್ತಿರುವುದು ಬೇಸರದ ಸಂಗತಿ.
ತಾಲ್ಲೂಕಿನ ಹಲವಾರು ಭಾಗಗಳಲ್ಲಿ ಬ್ಯಾನರ್ ಅಳವಡಿಸಿದ್ದು, ಪೋಸ್ಟರ್ ಹಾಕಿದ್ದು ಯಾವೊಂದರಲ್ಲೂ ಟ್ರಸ್ಟ್ ನ ಅಧ್ಯಕ್ಷರಾದ ರಾಜಶೇಖರ್ ರವರ ಪೋಟೋ ಆಗಲಿ ಅಥವಾ ಟ್ರಸ್ಟ್ ನ ಹೆಸರು ಮಾತ್ರ ಬಳಸುತ್ತಿರುವುದು ದುರಂತವೇ ಸರಿ. ಇದು ಟ್ರಸ್ಟ್ ಗೆ ತೋರುತ್ತಿರುವ ಅಗೌರವವೆಂದು ನಾನಾದರೂ ಭಾವಿಸುತ್ತೇನೆ. ಮತ್ತು ಎಲ್ಲದರಲ್ಲೂ ಸಕಲೇಶಪುರದಲ್ಲಿ 8 ನೇ ಬಾರಿಗೆ ಎಂದು ಉಲ್ಲೇಖಿಸಿರುವುದು ನಮ್ಮ ಸಕಲೇಶಪುರ ಕೋರೆಗಾಂವ್ ಕಾರ್ಯಕ್ರಮದ ಇತಿಹಾಸವನ್ನು ನಾವೇ ಮರೆತಿದ್ದೇವೆ ಎಂಬುದನ್ನೂ ಕೂಡ ಒಪ್ಪಲೇ ಬೇಕಾದ ಸಂಧರ್ಭ ಇದಾಗಿದೆ. ಸರ್ವರ ವಿಶ್ವಾಸ ಪಡೆದು ಕೇವಲ ಹಣದ ಖರ್ಚಿಗೆ ಜನರನ್ನು ಬಳಸದೇ ಆ ಜನರಿಗೆ ನೈಜ ಕೋರೆಗಾಂವ್ ಇತಿಹಾಸ ತಿಳಿಸಿ ಅದರಿಂದ ಸ್ಪೂರ್ತಿ ಪಡೆದ ನಮ್ಮ ಮುಂದಿನ ಜವಬ್ದಾರಿಗಳ ಬಗ್ಗೆ ತಿಳಿಸಿ ಅದರಂತೆ ಮುನ್ನುಗ್ಗುವುದು ಅನಿವಾರ್ಯವಾಗಿದೆ.
*ವಿಶೇಷವಾಗಿ ಈ ಎಲ್ಲಾ ಗೊಂದಲಗಳು, ಏಳು ಬೀಳು, ಜಿದ್ದುಗಳ ನಡುವೆಯೂ ಯಾರಿಗೂ ನೋವಾಗದಂತೆ ಸಮುದಾಯವನ್ನು ಸಮಾನ ಮನಸ್ಥಿತಿಯಲ್ಲಿ ಕೊಂಡೊಯ್ಯುತ್ತ ಬಂದ ಪ.ಜಾತಿ / ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ನಮ್ಮೆಲ್ಲ ನೌಕರ ಬಂಧುಗಳು ನೀಡಿದ ಸಹಕಾರವನ್ನು ಎಲ್ಲಾ ಸಂಧರ್ಭದಲ್ಲಿಯೂ ತಮ್ಮದೇ ರೀತಿಯಲ್ಲಿ ಸ್ಪಂದಿಸಿ ಸಹಕರಿಸಿ ಕಾರ್ಯಕ್ರಮದ ಯಶಸ್ಸಿಗೆ ನೀಡಿದ ಸಹಕಾರವನ್ನು ಎಲ್ಲಾ ಕಾಲಕ್ಕೂ ಸ್ಮರಣೀಯ…ಅವರ ಬೆವರಿನ ಹಣಕ್ಕಾದರೂ ಕಿಂಚಿತ್ತು ಅಗೌರವವಾಗದಂತೆ ನಾವೆಲ್ಲಾ ಅವರನ್ನು ದುರುಪಯೋಗ ಮಾಡದೆ ಮಾರ್ಗದರ್ಶನ ಪಡೆದು ಸಾಗುವುದು ಅನಿವಾರ್ಯ….*
ಮುಂದಿನ ದಿನಗಳಲ್ಲಾದರೂ ನೈಜ ಇತಿಹಾಸ ತಿಳಿದು 10ನೇ ವರ್ಷದ ಕಾರ್ಯಕ್ರಮವೆಂದು ಸಕಲೇಶಪುರದ ಜನರಿಗೆ ಮನವರಿಕೆ ಮಾಡೋಣ…
*ಕಾರ್ಯಕ್ರಮಕ್ಕೆ ಯಶಸ್ವಿಯಾಗಲಿ ಎಂದು ಹಾರೈಸುತ್ತಾ ಕೋರೆಗಾಂವ್ ವಿಜಯೋತ್ಸವದ ಶುಭಾಶಯಗಳನ್ನು ತಿಳಿಸುತ್ತೇನೆ..💐💐💐.*

ವಂದನೆಗಳೊಂದಿಗೆ,
*ಯೋಗೇಶ್ ಡಿ.ಆರ್ ಭಾರತೀಯ*
*ದೊಡ್ಡಕಲ್ಲೂರು*
*ಜೈ ಭೀಮ್ ಜೈ ಭಾರತ್*
