ಕಳ್ಳತನವಾಗಿ ಒಂದು ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಸಕಲೇಶಪುರ ನಗರ ಪೋಲಿಸರು.
ದಿನಾಂಕ:23/01/2026 ರಂದು ಈ ದಿನ ಮಧ್ಯಾಹ್ನ 02:30 ಗಂಟೆಯಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಸತ್ತಿಗಾಲ ಗ್ರಾಮದ ಶಿವಕುಮಾರ್ ಮನೆಯಲ್ಲಿ ಅವರು ತಾಯಿ ಭೈರಮ್ಮ ಒಬ್ಬರೇ ಇದ್ದಾಗ ಕೆಲಸ ನೆಪದಲ್ಲಿ ಅವರ ದಿಕ್ಕುತಪ್ಪಿಸಿ ಸುಮಾರು 70 ಸಾವಿರ ಮೌಲ್ಯದ ಬೆಳ್ಳಿ ಪದಾರ್ಥಗಳು,ಮತ್ತು 2 ಅ್ಯಂಡ್ರಾಯ್ಡ್ ಮೊಬೈಲ್ ಗಳು, ಮತ್ತು ಹಣವನ್ನು ಅಸ್ಸಾಂ ಮೂಲದ ರಜುಲ್ ಹುಸೇನ್, ಶುಕುರ್ ಆಲಿ,ಆಬಿದ್ ಆಲಿ ಎಂಬ ಮೂವರು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ತತ್ ಕ್ಷಣ ಕೃತ್ಯ ನಡೆದ ಸ್ಥಳಕ್ಕೆ ಸಕಲೇಶಪುರ ನಗರ ಪೊಲೀಸ್ ಠಾಣೆ ಧಾವಿಸಿ ನಂತರ ಸಕಲೇಶಪುರ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿ.ಸಿ.ವನರಾಜು ಮಾರ್ಗದರ್ಶನದಲ್ಲಿ ಸರಿಯಾಗಿ 03:30 ಕ್ಕೆ ಸಕಲೇಶಪುರದ ರೆಲಿಶ್ ಬಾರ್ ಮುಂಭಾಗ ಈ ಮೂವರು ಆರೋಪಿಗಳನ್ನು ಬಂಧಿಸಿ ನಂತರ ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
ಈ ಪತ್ತೆಕಾರ್ಯದಲ್ಲಿ ನಗರ ಪೊಲೀಸ್ ಠಾಣೆಯ ಪೃಥ್ವಿ, ಕೀರ್ತಿ,HC ರೇವಣ್ಣ, ಶ್ರೀಧರ್,PC ರೇವಣ್ಣ,ಮುಂತಾದವರು ಶ್ರಮಿಸಿರುತ್ತಾರೆ.
