Blog

ಹಾಸನ ಆಸ್ಪತ್ರೆಯಲ್ಲಿ ಕಿರುಕುಳ

ವರದಿ : ನಾಗೇಶ್ ಎಂ ಎಚ್
           ಮಾಗೇರಿ *


🔴ಹಾಸನ :ಹಾಸನ ಜಿಲ್ಲಾ ಸರ್ಕಾರಿ ಅಸ್ಪತ್ರೆ ಯಲ್ಲಿ ಸೆಕ್ಯೂರಿಟಿ ಗಾರ್ಡ್ ಮತ್ತು ರೋಗಿಗಳ ಸಂಬಧಿಕರ  ನಡುವೆ
ವಾದ ವಿವಾದ.


🔴ವಿಷ ತೆಗೆದುಕೊಂಡಿದ್ದ
ರೋಗಿಯರ ನೋಡಲು ಆಸ್ಪತ್ರೆ ಒಳಗೆ ಹೋಗಲು
ಕಾರ್ಯನಿರತ ಪತ್ರಕರ್ತರ
ಐ ಡಿ ಕಾರ್ಡ್ ನಿರಾಕರಣೆ ಮಾಡಿದ ಸೆಕ್ಯೂರಿಟಿ ಏಜೆನ್ಸಿ ಗಾರ್ಡ್

🔴ಏಜೆನ್ಸಿ ಅವರಿಗೆ ಒಂದು ಜೀವದ ಬೆಲೆ ಗೊತ್ತಾ?

🔴ಏಜೆನ್ಸಿಯಲ್ಲಿ ಕೆಲಸ ಮಾಡುವವರ ಪ್ರಾಮಾಣಿಕತೆ ಪ್ರಯತ್ನದಲ್ಲಿ ಬಡ ಕುಟುಂಬಗಳ ಮೇಲೆ ಅಟ್ಟಹಾಸ?
ನಮ್ಮ ಹಾಸನ ಜಿಲ್ಲೆಯ ಸಂಸದರೇ ಶ್ರೇಯಸ್ ಪಟೇಲ್ ರವರೆ ಇದನ್ನು ಗಮನಿಸಿ

🔴ಜಿಲ್ಲಾ ಆಸ್ಪತ್ರೆಗೆ ಬಡ ರೋಗಿಗಳು ಸಹ ಬರುತ್ತಾರೆ ಅವರಿಗೆ ಯಾವುದೇ ರಾಜಕೀಯ ಯಾವುದೇ ರಾಜಕೀಯ ಇರೋದಿಲ್ಲ..

🔴ರೋಗಿಯ ಜೊತೆ ಬರುವವರಿಗೆ ಪಾಸ್ ಓದಗಿಸಲು ಸೂಚನೆ ನೀಡಿ.

ರೋಗಿಗಳ ಸಂಬಂಧಿಕರು ಆಸ್ಪತ್ರೆಯ ಒಳಭಾಗದಲ್ಲಿ ರೋಗಿಗಳನ್ನು ನೋಡಲು ಬರುವಾಗ   ಸೆಕ್ಯೂರಿಟಿ ಗಾರ್ಡ್ ಗಳ ಅಬ್ಬರದ ಧ್ವನಿಯಲ್ಲಿ ಬೆಚ್ಚಿ ಬೀಳುವಂತಹ ಘಟನೆಗಳು ಜರುಗುತ್ತಿದೆ.

ಇದು ಸಾರ್ವಜನಿಕರ ಆಸ್ಪತ್ರೆ ಅಲ್ಲವೇ?
ಇದು ಏಜೆನ್ಸಿಗಳ ಆಸ್ಪತ್ರೆಯೇ?
ಡಿ ಎಚ್ ಓ ರವರೆ ಉತ್ತರ ನೀಡಬೇಕಿದೆ!


ಡಾಕ್ಟರ್ ಗಳೇ ದೇವರು ಇವರನ್ನ ನಂಬಿ  ನೂರಾರು  ಕಿಲೋಮೀಟರ್ ದೂರದಿಂದ ಹಾಸನ ಜಿಲ್ಲಾ ಆಸ್ಪತ್ರೆಗೆ  ರೋಗಿಗಳನ್ನು ಕರೆ ತಂದಿರುತ್ತೇವೆ

ಪ್ರತಿಯೊಬ್ಬರಿಗೂ ಸಹ  ರೋಗಿಗಳನ್ನು ಉಳಿಸಿಕೊಳ್ಳುವ ಹರಸಾಹಸದಲ್ಲಿ ನೀರು ಊಟ ಮನೆ ಮಠ ಕುಟುಂಬ ಮಕ್ಕಳು  ಎಲ್ಲನ್ನು ಬಿಟ್ಟು ಈ ಆಸ್ಪತ್ರೆಗೆ ಬಂದಿರುತ್ತಾರೆ.

ಇಂತಹ ಬಡ ಗುಬ್ಬಿಗಳ ಕುಟುಂಬಗಳ ಮೇಲೆ ಏಜೆನ್ಸಿ ಕುಟುಂಬಗಳ ಅಟ್ಟಹಾಸ

ಕುಟುಂಬದವರು ಊಟವನ್ನು ಕೊಡಲು ಮತ್ತು ಕೆಲವು ದಾಖಲಾತಿಗಳನ್ನು ಕೊಡಲು ಹಾಗೂ ಊಟ ತಿಂಡಿ ಕೊಡಲು ಹೋದರು ಸಹ  ಸೆಕ್ಯೂರಿಟಿ ಕಾರ್ಡ್ ಗಳು ಆಸ್ಪತ್ರೆ ಒಳಗೆ ಬಿಡಲು ನಿರಾಕರಿಸುತ್ತಾರೆ

ಏಕವಚನದಲ್ಲಿ ಹಳ್ಳಿಯ ಮುಗ್ಧ ಜನರಗಳನ್ನ  ತುಚ್ಚವಾಗಿ ಕಾಣುತ್ತಿದ್ದಾರೆ
ಆಸ್ಪತ್ರೆಯ ಒಳಭಾಗದಲ್ಲಿ ಎಲ್ಲಿ ನಿಂತರು ಎಲ್ಲಿ ಕೂತರು ನೀವು ಇನ್ನು ನಿಲ್ಲಬಾರದು ನೀವು ಹೋಗಿ ಎಂದು ಕೇವಲವಾಗಿ ವಯಸ್ಕರನ್ನು  ನಿಂದಿಸುತ್ತಾರೆ
ಎಂದು  ರೋಗಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರು ನಿಯಮ ಪಾಲನೆ ಮಾಡುವ ಹಾಗೆ  ಅಲ್ಲಿಯ ಸಿಬ್ಬಂದಿ ವರ್ಗವು ಸಹ ನಿಯಮ ಪಾಲನೆ ಮಾಡಬೇಕು

ಒಂದು ಸರ್ಕಾರಿ ನಮ್ಮ
ಆಸ್ಪತ್ರೆಯಲ್ಲಿ ಒಂದು ರೋಗಿಯ ಜೊತೆ ಇನ್ನೊಬ್ಬರು ಸಹಾಯಕರು  ಇರುವಂತೆ ಒಂದು ಪಾಸ್  
ಯಾವ ಸಮಸ್ಯೆಲ್ಲಿ ರೋಗಿ ಬಂದಿದ್ದಾನೆ ಅವರಿಗೆ ಸಹಾಯಕರು ಯಾವ ರೀತಿಯಲ್ಲಿ ಬೇಕಾಗುತ್ತದೆ ಇದರ ಬಗ್ಗೆ ಗಮನ ಹರಿಸಿ ಪಾಸ್
ವಿತರಣೆಯ ಬಗ್ಗೆ ಆಸ್ಪತ್ರೆಯ ಆಡಳಿತ ಗಮನ ಹರಿಸಬೇಕು ಎಂದು ಸಾರ್ವಜನಿಕರು  ತಿಳಿಸಿದ್ದಾರೆ.

ಯಾವುದೋ  ರಾಜಕೀಯ, ಸಂಘ ಸಂಸ್ಥೆಯ ಮುಖಂಡರು ಗಳು ಕಾಲ್ ಮಾಡಿದ್ದಲ್ಲಿ ಸೆಕ್ಯೂರಿಟಿ ಗಾರ್ಡ್ ಆ ವ್ಯಕ್ತಿಯನ್ನು ಒಳಗೆ ಕಳಿಸುವುದು.
ಯಾವುದೇ ಸಪೋರ್ಟ್ ಇಲ್ಲದೆ
ಸಾರ್ವಜನಿಕ ಆಸ್ಪತ್ರೆ ಸಾರ್ವಜನಿಕರಿಗಾಗಿರುವ ಆಸ್ಪತ್ರೆ ಎಂದು ಬಂದ ಬಡ ಜನರಿಗೆ ತುಂಬಾ ಕೇವಲವಾಗಿ  ಮಾತನಾಡಿ ಅವರ ಮನಸ್ಸನ್ನು ಘಾಸಿ  ಮಾಡುತ್ತಿರುವುದು ಎಷ್ಟು ಸರಿ ?

ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿಗಳು ಸಂಕಷ್ಟದಲ್ಲಿ ಇರುವ ಕುಟುಂಬಗಳೊಂದಿಗೆ ಶಾಂತ್ವಾನ ನೀಡುವುದರ ಜೊತೆಗೆ ಅವರಿಗೆ ವೈಯಕ್ತಿಕ ಸಪೋರ್ಟ್ ಮಾಡುವುದರ ಜೊತೆಗೆ ಏನು ನಮ್ಮ ಸರ್ಕಾರದ ನಿಯಮಗಳು ಸರ್ಕಾರಿ ಆಸ್ಪತ್ರೆಯಲ್ಲಿ ಪಾಲನೆ ಮಾಡಬೇಕು ಅದರ ಬಗ್ಗೆ ವಿವೇಚನೆಯಿಂದ ಹೇಳುವುದು ಅವರ ಆದ ಕರ್ತವ್ಯ.
ಕೆಲವು ಜನರ
ಎಷ್ಟೋ ಜನರ ಬಿಪಿ  ಸುಗರ್ ಹೆಚ್ಚಾಳಕ್ಕೆ
ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Related posts

ಆಲೂರುನಲ್ಲಿ ರೈತ ಆತ್ಮಹತ್ಯೆ

Bimba Prakashana

ಪಶ್ಚಿಮ ಘಟ್ಟ ಉಳಿಸಿ ಕಾರ್ಯಕ್ರಮದಲ್ಲಿ ದಲಿತರಿಗೆ ಅವಕಾಶ ಇಲ್ಲ

Bimba Prakashana

ಅರೇ ಹಳ್ಳಿ ಬಳಿ ಇನ್ನೋವಾ ಕಾರು ಪಲ್ಟಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More