Blog

ಬೆಂಗಳೂರುನಿಂದ ಅಯೋಧ್ಯೆಗೆ 43 ಗಂಟೆಯಲ್ಲಿ ತಲುಪಿದ ಅರಸೀಕೆರೆ ಯುವಕ

ಬೆಂಗಳೂರಿನಿಂದ ಅಯೋಧ್ಯೆಗೆ 43 ಗಂಟೆಯಲ್ಲಿ ದ್ವಿಚಕ್ರ ವಾಹನದಲ್ಲಿ ತಲುಪಿ ದಾಖಲೆ ಬರೆದ ಅರಸೀಕೆರೆ ಯುವಕ

ಅರಸೀಕೆರೆ: ದೃಢ ಸಂಕಲ್ಪ ಮತ್ತು ಸಾಹಸ ಪ್ರವೃತ್ತಿ ಇದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು ಎಂಬುದನ್ನು  ಅರಸೀಕೆರೆ ತಾಲ್ಲೂಕಿನ ಯುವಕ ಋತ್ವಿಕ್ ಎಸ್.ಎಸ್. ಸಾಬೀತುಪಡಿಸಿದ್ದಾರೆ. ಬೆಂಗಳೂರಿನಿಂದ ಅಯೋಧ್ಯೆಯ ರಾಮಮಂದಿರದವರೆಗೆ ದ್ವಿಚಕ್ರ ವಾಹನದಲ್ಲಿ 43 ಗಂಟೆಗಳಲ್ಲಿ ಪ್ರಯಾಣ ಪೂರ್ಣಗೊಳಿಸುವ ಮೂಲಕ ಅವರು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾರೆ.


ಸಾಧನೆಯ ಹಾದಿ:
ಋತ್ವಿಕ್ ಅವರು ತಮ್ಮ ಈ ಮಹತ್ವಾಕಾಂಕ್ಷೆಯ ಯಾತ್ರೆಯನ್ನು 2025ರ ಡಿಸೆಂಬರ್ 5ರಂದು ಬೆಳಿಗ್ಗೆ 5:09ಕ್ಕೆ ಬೆಂಗಳೂರಿನಿಂದ ಆರಂಭಿಸಿದ್ದರು. ಸುಮಾರು 1,886.6 ಕಿ.ಮೀ. ದೂರವನ್ನು ಕ್ರಮಿಸಿದ ಅವರು, ಡಿಸೆಂಬರ್ 7ರ ಮಧ್ಯರಾತ್ರಿ 2:59ಕ್ಕೆ ಅಯೋಧ್ಯೆಯನ್ನು ತಲುಪಿದರು. ಈ ಇಡೀ ಪ್ರಯಾಣಕ್ಕೆ ಅವರು ತೆಗೆದುಕೊಂಡ ಒಟ್ಟು ಸಮಯ 1 ದಿನ, 19 ಗಂಟೆ, 50 ನಿಮಿಷಗಳು (ಒಟ್ಟು 43 ಗಂಟೆ 50 ನಿಮಿಷ).


ಕನಸು ನನಸಾದ ಕ್ಷಣ:
ಹಲವು ವರ್ಷಗಳಿಂದ ಬೆಂಗಳೂರಿನಿಂದ ಅಯೋಧ್ಯೆಗೆ 48 ಗಂಟೆಯೊಳಗೆ ತಲುಪಬೇಕೆಂಬ ಕನಸು ಕಂಡಿದ್ದ ಋತ್ವಿಕ್, ಕಠಿಣ ಪರಿಶ್ರಮದಿಂದ ಆ ಗುರಿಯನ್ನೂ ಮೀರಿ ಸಾಧನೆ ಮಾಡಿದ್ದಾರೆ. ಇವರ ಈ ಸಾಹಸವನ್ನು ಗುರುತಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ಮುಖ್ಯ ಸಂಪಾದಕ ಡಾ. ಬಿ. ಸ್ವರೂಪ್ ರಾಯ್ ಚೌಧರಿ ಅವರು ಋತ್ವಿಕ್ ಹೆಸರನ್ನು ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಇವರಿಗೆ “Rider in Karnataka” ಎಂಬ ಬಿರುದು ಕೂಡ ಸಂದಿದೆ.


ಅಭಿನಂದನೆಗಳ ಮಹಾಪೂರ:
ತಾಲೂಕಿಗೆ ಕೀರ್ತಿ ತಂದ ಯುವ ಸಾಧಕನನ್ನು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್, ನಗರ ಅಧ್ಯಕ್ಷ ಸಂತೋಷ್ ಕುಮಾರ್, ಮಹೇಶ್, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್, ರೈಸ್ ಮಿಲ್ ಮಂಜು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಫೆಬ್ರವರಿ 9ರಂದು ಅಧಿಕೃತ ಪ್ರಮಾಣಪತ್ರ ಸ್ವೀಕರಿಸಿದ ಋತ್ವಿಕ್ ಅವರಿಗೆ ಜಿಲ್ಲೆಯಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.

ವರದಿ ಪರ್ವಿಜ್ ಅಹಮದ್

Related posts

ಹೆತ್ತೂರು ಗ್ರಾಮಸಭೆಗೆ ಜನರ ಬಹಿಷ್ಕಾರ

Bimba Prakashana

ಹೆತ್ತೂರು ಹೋಬಳಿಯ ಅಭಿವೃದ್ಧಿಗೆ ಆದ್ಯತೆ – ಶಾಸಕ ಸಿಮೆಂಟ್ ಮಂಜುನಾಥ್

Bimba Prakashana

ಪಾಳ್ಯದಲ್ಲಿ ಒಡೆದು ಹೋದ ಕಿರು ಸೇತುವೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More