ಬಾಗೆ ಗ್ರಾಮ ಪಂಚಾಯತ್ ನಲ್ಲಿ ಲಕ್ಷಾಂತರ ಮೊತ್ತ ಅವ್ಯವಹಾರ ಆಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದ ಸಕಲೇಶಪುರ ತಾಲೂಕು ಪಂಚಾಯತ್ ನ ಕಾರ್ಯ ನಿರ್ವಹಣಾ ಅಧಿಕಾರಿಗಳು ಆ ಗ್ರಾಮ ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಭಿವೃದ್ಧಿ ಅಧಿಕಾರಿ ಚಿನ್ನ ಸ್ವಾಮಿಯನ್ನು ಅಮಾನತು ಮಾಡುವಂತೆ ಮಾರ್ಚ್ 18 ರಂದು ಜಿಲ್ಲಾ ಪಂಚಾಯತ್ ಗೆ ಪತ್ರ ಬರೆದಿದ್ದರು.
ಆದರೆ ಜಿಲ್ಲಾ ಪಂಚಾಯತವು ಅವರನ್ನು ಅಮಾನತು ಮಾಡದೇ ವರ್ಗಾವಣೆ ಮಾಡಿ ಆದೇಶ ನೀಡಿದೆ.
🔴ಟೆಂಡರ್ ಕರೆಯದೆ ಸಾಮಗ್ರಿ ಖರೀದಿ 🔴
ಬಾಗೆ ಗ್ರಾಮ ಪಂಚಾಯತ್ ಗೆ ಹಲವಾರು ಸಾಮಗ್ರಿಗಳನ್ನು ಖರೀದಿ ಮಾಡುವಾಗಲೂ ಸರಕಾರಿ ಆದೇಶ ಅನ್ವಯ ಟೆಂಡರ್ ಕರೆಯದೆ ಖರೀದಿ ಮಾಡಿ ಅವ್ಯವಹಾರ ಮಾಡಲಾಗಿದೆ ಎಂಬ ವಿಚಾರಕ್ಕೆ ಪುಷ್ಟಿ ಸಿಗುವಂತೆ ಮಾಹಿತಿಗಳು ಲಭ್ಯ ಆಗಿದೆ.
🔴ಯಾರಿಗೆಲ್ಲ ಸಂದಾಯ🔴
ಸ್ಥಳೀಯ ಮಾಹಿತಿ ಪ್ರಕಾರ ಆ ಗ್ರಾಮ ಪಂಚಾಯತ್ ನಲ್ಲಿದ್ದ ಜನ ಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳ ಖಾತೆಗೆ ಹಾಗೂ ಜೋಬಿಗೆ ಕೂಡಾ ಲಕ್ಷಗಟ್ಟಲೆ ಮೊತ್ತ ಜಮಾ ಆಗಿರುವುದಾಗಿ ತಿಳಿದು ಬಂದಿದೆ.
2 ಅವಧಿಯಲ್ಲಿ ಕೂಡಾ ಈ ಭ್ರಷ್ಟಾಚಾರ ಆಗಿದೆ ಎನ್ನಲಾಗಿದ್ದು ಈ ಬಗ್ಗೆ ಕೂಡಾ ತನಿಖೆ ಆಗಬೇಕಿದೆ.
🔴ಯಾರಿಗೆಲ್ಲ ಎಷ್ಟು – ಶೀಘ್ರದಲ್ಲಿ ಬಹಿರಂಗ🔴
ಅಂತೂ ಕಳೆದ ಸುಮಾರು 10 ವರ್ಷಗಳಿಂದ ಅವ್ಯವಹಾರ ನಡೆಯುತ್ತಿದ್ದರು ಈ ಬಗ್ಗೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಅವ್ಯವಹಾರಕ್ಕೆ ತಮ್ಮ ಪಾಲು ಕೂಡಾ ನೀಡಿದಂತೆ ಇರುವುದು ಕಂಡು ಬಂದಿದೆ.
ಹಣ ಸಂದಾಯ ಆದ ವಿವರ ಶೀಘ್ರದಲ್ಲಿ ಪ್ರಕಟಣೆ ಆಗಲಿದೆ
