ಬಿರಡಹಳ್ಳಿ ಗ್ರಾಮ ಪಂಚಾಯತ್ ಬೆಳೆಗಾರರ ಸಂಘ, ಯೋಗ ಚೇತನ ಕೇಂದ್ರ ಅಡಗೂರು ಮತ್ತು ಹಾಸನ ರಕ್ತ ಕೇಂದ್ರ ಇವರು ಆಯೋಜಿಸಿದ ಪಹಲ್ ಗಾಮ್ ಮಡಿದವರ ಮತ್ತು ಕರ್ನಾಟಕ ರತ್ನ ಡಾ. ರಾಜಕುಮಾರ್ ವರ 97 ನೇ ಹುಟ್ಟುಹಬ್ಬದ ಸ್ಮರಣಾರ್ಥ ಬೃಹತ್ ರಕ್ತದಾನ ಮತ್ತು ಉಚಿತ ಕಣ್ಣಿನ ತಪಾಸಣೆಯನ್ನು 2.05. 26ನೇ ಶನಿವಾರ ಗ್ರಾಮ ಪಂಚಾಯಿತಿಯ ಕುವೆಂಪು ಸಭಾಂಗಣದಲ್ಲಿ ಯಶಸ್ವಿಯಾಗಿ ಮಾಡಲಾಯಿತು.
ಪಂಚಾಯಿತಿ ಮಟ್ಟದಲ್ಲಿ 32 ಬಾಟಲ್ ರಕ್ತವನ್ನು ಸಂಗ್ರಹಿಸಿಕೊಡಲಾಯಿತು. ಈ ಕಾರ್ಯಕ್ರಮದಲ್ಲಿ ಯೋಗ ಗುರೂಜಿ ಚೇತನ್, ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಅಧ್ಯಕ್ಷರಾದ ವಿವಿ ಯೋಗೇಶ್, ಹಿರಿಯ ಬೆಳೆಗಾರರಾದ ಬಿಎಂ ಕೃಷ್ಣಪ್ರಸಾದ್. ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಕೆ ಸುಧೀಶ್. ಕಸಬ ಬೆಳೆಗಾರ ಸಂಘದ ನಿರ್ದೇಶಕರಾದ ಕೆ ಡಿ. ಕುಮಾರ್ ಸಂಘದ ಪ್ರತಿನಿಧಿಗಳಾದ ಚೇತನ್,ಶಶಿಕುಮಾರ್, ಬಿಜೆ ಮಂಜುನಾಥ್ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
