ವರದಿ :
ನಾಗೇಶ್ ಎಂ ಹೆಚ್ ಮಾಗೇರಿ.
🔴ಸಕಲೇಶಪುರದಲ್ಲಿ ಘೋರ ಘಟನೆ.
🔴ಲೈಂಗಿಕ ಕ್ರಿಯೆಗೆ ನಿರಕರಿಸಿದ್ದಕ್ಕೆ ಮಹಿಳೆಯ ಕೊಲೆ
🔴ಅತ್ತಿಹಳ್ಳಿ ಗ್ರಾಮದಲ್ಲಿ ಘಟನೆ.
🔴ಎ ಆರ್ ರಮ್ಯ.( 35) ಕೊಲೆಯಾದ ದುರ್ದೈವಿ.
ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ಏಪ್ರಿಲ್ 28 ರಂದು ಅತ್ತಿಹಳ್ಳಿ ಗ್ರಾಮದಲ್ಲಿ ಮರಣ ಹೊಂದಿದ ಅತ್ತೆಯ ಅಂತ್ಯಸಂಸ್ಕಾರಕ್ಕೆ ಬಂದ ರಮ್ಯರವರನ್ನು ಅತ್ತಿಹಳ್ಳಿ ಗ್ರಾಮದ ಚಂದ್ರು 41 ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ರಮ್ಯಾ ಅವರು ನಿರಾಕರಿಸಿದ್ದಕ್ಕಾಗಿ
ರಮ್ಯಾ ರವರ ಮರ್ಮಾಂಗಕ್ಕೆಒದ್ದು
ತೀವ್ರ ಹಲ್ಲೆ ನಡೆಸಿದ್ದು ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಏಪ್ರಿಲ್ 30 ರಂದು
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಮ್ಯಾ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ರಮ್ಯಾ ರವರು ಬೆಂಗಳೂರಿನಲ್ಲಿ ನರ್ಸಿಂಗ್ ಕೆಲಸ ಮಾಡುತ್ತಿದ್ದರು.ಇವರು ವಿಧವೆಯಾಗಿದ್ದರು
ಚಂದ್ರನ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ.
ಘಟನೆ ತಿಳಿದು ಯಸಳೂರು ಪೊಲೀಸ್ ಮಾಹಿತಿ ಕಲೆ ಹಾಕಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ
ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಯನ್ನು ಬಂದಿಸಲಾಗಿದೆ.
