ನಾಗೇಶ್ ಎಂ ಹೆಚ್ ಮಾಗೇರಿ.
ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ
ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ತಾಂತ್ರಿಕ ಕಾರಣಗಳಿಂದ ಅಗ್ನಿ ಅವಘಡ ಸಂಭವಿಸಿದೆ .
ವಿದ್ಯಾರ್ಥಿಗಳು ಊಟದ ಸಮಯದಲ್ಲಿ ಸಂಭವಿಸಿದ ಅನಾಹುತದಿಂದಾಗಿ ಯಾವುದೇ
ಪ್ರಾಣಪಾಯ ಆಗಿಲ್ಲ ಎಂದು ತಿಳಿದುಬಂದಿದೆ
ಸುಮಾರು ಹದಿನೈದು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಭಸ್ಮ ವಾಗಿದೆ ಎಂದು ತಿಳಿದು ಬಂದಿದೆ.
ಶಾಲೆಯ ಕೊಠಡಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಮಾತ್ರದಲ್ಲಿ ವ್ಯಾಪಿಸಿ
20 ಕಂಪ್ಯೂಟರ್ ಗಳು, ಸ್ಮಾರ್ಟ್ ಟಿವಿ, ಟೇಬಲ್, ವಿದ್ಯುತ್ಸಂಪರ್ಕ, ಡ್ರೆಸ್ ಗಳು, ಬಾಗಿಲು, ಕಿಟಕಿ, ಬೋಧನಾ ಫಲಕಗಳು, ಪುಸ್ತಕಗಳು, ನೂರು ಕುರ್ಚಿಗಳು ಸೇರಿದಂತೆ 15 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿ ಸುಟ್ಟು ಕರಕಲಾಗಿದೆ.
ವಿಷಯ ತಿಳಿದು ಅಗ್ನಿಶಾಮಕ ದಳದವರು ಸುಮಾರು
ಮದ್ಯಾಹ್ನ 2:00 ಗಂಟೆಗೆ ಬೆಂಕಿ ನಂದಿಸಿದರು
previous post
