ಆಲೂರು ಮಗ್ಗೆ ಕಾರಗೋಡುವಿನ ಇನ್ ಸ್ಪೇರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ವಲಯ ಅರಣ್ಯ ಅಧಿಕಾರಿಗಳಾದ ಸುನಿಲ್ ರಾಥೋಡ್, ಸಹಾಯಕ ಅರಣ್ಯ ಅಧಿಕಾರಿಗಳಾದ ಮಂಜೇ ಗೌಡ, ಸಹಾಯಕ ವಲಯ ಅರಣ್ಯ ಅಧಿಕಾರಿಗಳಾದ ವೇಣು ಗೋಪಾಲ, ರಾಘವೇಂದ್ರ,ಮುಖ್ಯೋಪಾಧ್ಯಯಾರಾದ ಅಭಿಷೇಕ್ ಭಾಗವಹಿಸಿದ್ದರು.
8 ನೇ ತರಗತಿಯ ಲಕ್ಷಿತ್ ಪರಿಸರ ಬಗ್ಗೆ ಮಾತನಾಡಿದರು.
10 ನೇ ತರಗತಿಯ ಸುಜಾತ ಸ್ವಾಗತ ಮಾಡಿದರೆ
8 ನೇ ತರಗತಿಯ ಮಿಥುನ್ ಧನ್ಯವಾದಗಳನ್ನು ಸಲ್ಲಿಸಿದರು.
10 ನೇ ತರಗತಿಯ ರಚನ ಕಾರ್ಯಕ್ರಮ ನಿರೂಪಣೆ ಮಾಡಿದರು.
ಬಳಿಕ 9 ನೇ ತರಗತಿ ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮ ಮಾಡಿದರು.




