ಮಾಜಿ ಶಾಸಕರು ಜಿಲ್ಲಾ ಜೆಡಿಎಸ್ ನ ಅಧ್ಯಕ್ಷರು ಆದ ಸರಳ ಸಜ್ಜನಿಕೆಯ ಕೆಎಸ್ ಲಿಂಗೇಶರವರನ್ನು ಸಿ ಓ ಡಿ ತನಿಖೆ ಹೊಂದಿಸಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಎ ಪಿ ಎಂ ಸಿ ಅಧ್ಯಕ್ಷ ಕುಮಾರ್ ತಿಳಿಸಿದ್ದಾರೆ.
ಫಾರಂ 53 ಅರ್ಜಿ ವಿಚಾರವಾಗಿ ರೈತರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಇಂದು ಆರೋಪಿಸಿ ಸಿ ಓ ಡಿ ಅಧಿಕಾರಿಗಳು ಬಂಧಿಸಿದ್ದು ಲಿಂಗೇಶ್ ರವರು ತಮ್ಮ ಅಧಿಕಾರ ಅವಧಿಯಲ್ಲಿ ಸುಮಾರು 1800 ಕೋಟಿ ಗು ಹೆಚ್ಚು ಅನುದಾನ ತಂದಿದ್ದು ಎಲ್ಲಾ ವರ್ಗದವರಿಗೂ ಎಲ್ಲಾ ಗ್ರಾಮಕ್ಕೂ ಸಮಾನವಾಗಿ ಕೆಲಸ ಮಾಡಿದ್ದಾರೆ.
ಜೊತೆಗೆ ಹಿಂದಿನ ಅವಧಿಯಲ್ಲಿ ಅಧಿಕಾರಿಗಳು ಮಾಡಿದ ತಪ್ಪಿಗೆ ಇವರನ್ನು ದೋಷಿಸುವುದು ಎಷ್ಟರಮಟ್ಟಿಗೆ ಸರಿ ಕೂಡಲೇ ಶ್ರೀ ಕೆಎಸ್ ಲಿಂಗೇಶ್ವರವರನ್ನು ಬಿಡುಗಡೆ ಮಾಡಿ ನ್ಯಾಯ ಸಮ್ಮತವಾಗಿ ತನಿಖೆ ಮಾಡಲಿ ಇವರ ಜೊತೆ ತಾಲೂಕಿನ ಮಹಾಜನತೆ ಪಕ್ಷದ ನಾಯಕರುಗಳು ಸಮಾಜದ ಮುಖಂಡರುಗಳು ಜೊತೆಯಾಗಿ ನಿಲ್ಲಬೇಕೆಂದು ಅದ್ದೂರಿ ಕುಮಾರ್ ತಿಳಿಸಿದ್ದಾರೆ
