ಸಕಲೇಶಪುರ: ಪ್ರಜಾ ಸೇವಾ ಕಾರ್ಯಕ್ರಮಕ್ಕೆ ಅಬಕಾರಿ ಸಚಿವರು ಹಾಗು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಿವಲಿಂಗೇಗೌಡರು ಸಕಲೇಶಪುರಕ್ಕೆ ಬಂದು ಅಹವಾಲು ಸ್ವೀಕರಿಸಲಿದ್ದಾರೆ .
ಸಕಲೇಶಪುರ ಉಪವಿಭಾಗಾಧಿಕಾರಿ ಹುಲ್ಲು ಮನಿ ತಿಮ್ಮಣ್ಣ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ದಿನಾಂಕ: 19-9-2026 ಶನಿವಾರ ಬೆಳಿಗ್ಗೆ 10-30 ರಿಂದ ತಾಲೋಕು ಕಛೇರಿ ಅವರಣದಲ್ಲಿ ಪ್ರಜಾ ಸೇವಾ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರುಗಳ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ಅಥವಾ ಸೇವೆ ಒದಗಿಸಲಿದ್ದೇವೆ .
ಸಾರ್ವಜನಿಕರು ಈ ಸಂದರ್ಭ ಸದುಪಯೋಗ ಪಡಿಸಿಕೊಳ್ಳಲು ಈ ಮೂಲಕ ವಿನಂತಿಸಿದ್ದಾರೆ.
