Blog

1 ರೂ ಗೆ ಬಿಸಿ ಬಿಸಿ ಟೀ

ಇಂದು ಬೆಳಿಗ್ಗೆ ಸಕಲೇಶಪುರದಲ್ಲಿ ಮಲೆನಾಡು ರಕ್ಷಣ ಸೇನೆಯ ಕಾರ್ಯಕರ್ತರು 1 ರೂ ನಲ್ಲಿ ಟೀ ನೀಡುವ ಮೂಲಕ ಒಂದು ವಿನೂತನ ಪ್ರತಿಭಟನೆ ಹಮ್ಮಿ ಕೊಂಡಿದ್ದರು.

ಸಕಲೇಶಪುರದ ಹೇಮಾವತಿ ನದಿಯ ಬಳಿ ಉದ್ಯಮಿಯೋರ್ವರು ಸರಕಾರಿ ಜಾಗವನ್ನು ಕಬಳಿಸಲು ಹುನ್ನಾರ ನಡೆಸುವ ಬಗ್ಗೆ ಮಲೆನಾಡು ರಕ್ಷಣಾ ಸೇನೆ ಆಕ್ರೋಶ ವ್ಯಕ್ತ ಪಡಿಸಿ ವಿನೂತನ ಪ್ರತಿಭಟನೆ ಮಾಡಿತ್ತು.

ಜನರಿಗೆ 1 ರೂ ನಲ್ಲಿ ಟೀ ನೀಡತೊಡಗಿದಾಗ  ಶಾಸಕ ಸಿಮೆಂಟ್ ಮಂಜುನಾಥ್ ರವರು ಈ ಸಮಸ್ಯೆ ಪರಿಹಾರ ಮಾಡುವುದಾಗಿ ಭರವಸೆ ನೀಡಿದ್ದರಿಂದ ಬೋರ್ಡನ್ನು ಕಾನೂನು ರೀತಿಯಲ್ಲಿ ನಾನು ತೆರವುಗೊಳಿಸಿಕೊಡುತ್ತೇನೆ ಎಂದು ಹೇಳಿದ್ದರಿಂದ ಹೋರಾಟವನ್ನು ಈ ದಿನ ತಾತ್ಕಾಲಿಕವಾಗಿ ಕೈ ಬಿಡಲಾಯಿತು.

ಮುಂದಿನ ದಿನಗಳಲ್ಲಿ ಬೋರ್ಡ್ ತೆರವುಗೊಳಿಸದೆ ಇದ್ದರೆ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಡಾ. ಸಾಗರ್ ಜಾನೇ ಕೆರೆ ತಿಳಿಸಿದ್ದಾರೆ

Related posts

ಸಕಲೇಶಪುರದಲ್ಲಿ ರಕ್ತದಾನ ಶಿಬಿರ

Bimba Prakashana

ಆಲೂರುನಲ್ಲಿ 2: ರಸ್ತೆಗಳಿಗೆ ಅನುದಾನ ಮಂಜೂರು

Bimba Prakashana

ಟ್ಯಾಂಕ್ ಗೆ ಬಿದ್ದು ಬಾಲಕ ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More