ರಾಜೀವ ಗಾಂಧಿ ವಸತಿ ಯೋಜನೆಯ ಅನುದಾನದಲ್ಲಿ ರೂ 2 ಕೋಟಿ ವಂಚನೆ ಮಾಡಿದ ಸಕಲೇಶಪುರದ ಹೌಸಿಂಗ್ ನೋಡೆಲ್ ಅಧಿಕಾರಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯ ಆಗಿದೆ.
ಈ ಅಧಿಕಾರಿ ತಾಲೂಕು ಹೌಸಿಂಗ್ ನೋಡೆಲ್ ಅಧಿಕಾರಿ ರಾಜೇಶ್ ಎಂದು ತಿಳಿದು ಬಂದಿದೆ.
ಬಡ ಜನರಿಗಾಗಿ ನೀಡುವ ಈ ಯೋಜನೆಯಲ್ಲಿ ಹಲವಾರು ಮಂದಿಗೆ ಸೂರು ನೀಡುವ ಕಾರ್ಯ ಆಗುತ್ತಿತ್ತು.
ಈ ಬಗ್ಗೆ ಹಲವಾರು ತಿಂಗಳುಗಳಿಂದ ತನಿಖೆ ನಡೆಯುತ್ತಿತ್ತು. ಇಂದು ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ
previous post
